ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ: ರಾಹುಲ್‌ ಗಾಂಧಿ

Public TV
2 Min Read
Rahul Gandhi 1

ಮುಂಬೈ: ಮೋದಿಯವರು (Narendra Modi) ಕಾಂಗ್ರೆಸ್‌ ನಾಯಕರು ಪ್ರದರ್ಶಿಸುತ್ತಿರುವ ಸಂವಿಧಾನ ಪ್ರತಿ ಎಂದು ಹೆಸರಿಸಲಾದ ʻಕೆಂಪು ಪುಸ್ತಕʼ ಖಾಲಿ ಪುಟಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಏಕೆಂದರೆ ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ. ಅದರಲ್ಲಿ ಏನಿದೆ ಎಂಬುದೂ ಗೊತ್ತಿಲ್ಲ. ಅದಕ್ಕೆ ಖಾಲಿ ಎಂದು ಭಾವಿಸಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi,) ಕುಟುಕಿದರು.

ಮಹಾರಾಷ್ಟ್ರ ಚುನಾವಣಾ (Maharashtra Election) ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ʻಸಂವಿಧಾನʼ (Constitution) ಪ್ರತಿ ಎಂದು ಹೇಳಲಾದ ಕೆಂಪು ಪುಸ್ತಕ (Red Book) ಪ್ರದರ್ಶಿಸಿದ ರಾಹುಲ್‌ ಗಾಂಧಿ, ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಸಂವಿಧಾನ ಮತ್ತು ಭಾರತದ ರಾಷ್ಟ್ರೀಯ ಐಕಾನ್‌ಗಳನ್ನು ಅಗೌರವಗೊಳಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ:  ಕೋವಿಡ್‌ ಅಕ್ರಮ ತನಿಖೆಗೆ ಎಸ್‌ಐಟಿ ರಚನೆ – ಬಿಎಸ್‌ವೈ ವಿರುದ್ಧ ಶೀಘ್ರ FIR ಸಾಧ್ಯತೆ!

Narendra Modi

ಮೋದಿಯವರು ಕಾಂಗ್ರೆಸ್‌ ನಾಯಕರು ಪ್ರದರ್ಶಿಸುತ್ತಿರುವ ಸಂವಿಧಾನ ಪ್ರತಿ ಎಂದು ಹೆಸರಿಸಲಾದ ʻಕೆಂಪು ಪುಸ್ತಕʼ ಖಾಲಿ ಪುಟಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಏಕೆಂದರೆ ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ. ಅದರಲ್ಲಿ ಏನಿದೆ ಎಂಬುದೂ ಗೊತ್ತಿಲ್ಲ. ಅದಕ್ಕೆ ಖಾಲಿ ಎಂದು ಭಾವಿಸಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಗಮನಾರ್ಹ ಸಾಧನೆ – 24.2 GW ಸಾಮರ್ಥ್ಯ ವೃದ್ಧಿ: ಜೋಶಿ

Rahul Gandhi

ಸಂವಿಧಾನ ಭಾರತದ ಆತ್ಮ ಮತ್ತು ದೇಶದ ಐಕಾನ್‌ಗಳಾದ ಬಿರ್ಸಾ ಮುಂಡಾ, ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ರೂಪಿಸಿದ ತತ್ವಗಳನ್ನು ಒಳಗೊಂಡಿದೆ ಎಂದು ತಿರುಗೇಟು ನೀಡಿದರು. ಇದೇ ವೇಳೆ ಸಂವಿಧಾನ ಪ್ರತಿ ಎಂದು ಹೇಳಲಾದ ಕೆಂಪು ಪುಸ್ತಕವನ್ನು ತೆರೆದು ತೋರಿಸಿದ ರಾಗಾ, ಮೋದಿ ಜೀ ಈ ಪುಸ್ತಕ ಖಾಲಿಯಾಗಿಲ್ಲ. ಇದು ಭಾರತದ ಆತ್ಮ ಮತ್ತು ಜ್ಞಾನ ಹೆಮ್ಮಿಯಿಂದ ಹೇಳಿದರು.

ಇನ್ನೂ ನಗರ ನಕ್ಸಲರು ಮತ್ತು ಅರಾಜಕತಾವಾದಿಗಳಿಗೆ ಬೆಂಬಲ ಸೂಚಿಸುತ್ತಾರೆ ಎಂಬ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಗಾ, ಪುಸ್ತಕದ ಕೆಂಪು ಬಣ್ಣದ ಬಗ್ಗೆ ಬಿಜೆಪಿಗೆ ಆಕ್ಷೇಪವಿದೆ. ಬಣ್ಣ ಕೆಂಪು ಅಥವಾ ನೀಲಿ ಎಂಬುದು ಮುಖ್ಯವಲ್ಲ. ನಾವು ಸಂವಿಧಾನ ಸಂರಕ್ಷಿಸಲು ಬದ್ಧರಾಗಿದ್ದೇವೆ, ಅದಷ್ಟೇ ಮುಖ್ಯ. ಸಂವಿಧಾನ ರಕ್ಷಣೆಗಾಗಿ ನಮ್ಮ ಪ್ರಾಣ ತ್ಯಾಗ ಮಾಡಲೂ ಸಿದ್ಧರಿದ್ದೇವೆ ಎಂದು ಗುಡುಗಿದರು,

ಮುಂದುವರಿದು ಸರ್ಕಾರದಲ್ಲಿ ಆದಿವಾಸಿಗಳಿಗೆ ಸೀಮಿತ ಪ್ರಾತಿನಿಧ್ಯದ ಕುರಿತು ಮಾತನಾಡಿ, ಸರ್ಕಾರ ನಡೆಸುತ್ತಿರುವ 90 ಅಧಿಕಾರಿಗಳಲ್ಲಿ ಒಬ್ಬರೇ ಆದಿವಾಸಿ ಇರುವುದು. ಬಿಜೆಪಿ ಹಾಗೂ ಸಮಾನಾಂತರ ಪಕ್ಷಗಳು ಆದಿವಾದಿಗಳನ್ನು ಕಾಡಿನಲ್ಲೇ ನಿರ್ಬಂಧಿಸುವ ಕೆಲಸಕ್ಕೆ ಮುಂದಾಗಿದೆ. ಆದ್ರೆ ಆದಿವಾಸಿಗಳು ದೇಶದ ಮೊದಲ ಮಾಲೀಕರು ಮತ್ತು ಜಲ (ನೀರು), ಕಾಡು (ಅರಣ್ಯ) ಮತ್ತು ಜಮೀನ್ (ಭೂಮಿ) ಮೇಲೆ ಮೊದಲ ಹಕ್ಕು ಇರುವುದು ಅವರಿಗೆ ಎಂಬುದನ್ನು ಅರಿತುಕೊಳ್ಳಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು. ಇದನ್ನೂ ಓದಿ: ರಿಯಲ್‌ ಎಸ್ಟೇಟ್‌ ಮಾಫಿಯಾದಿಂದ ಮನನೊಂದು ದಂಪತಿ ಆತ್ಮಹತ್ಯೆ; 12 ಮಂದಿ ವಿರುದ್ಧ FIR

Share This Article