ಹಾಸನ: ಕಾಶ್ಮೀರ ಸಮಸ್ಯೆ ಉಲ್ಭಣಿಸಲು ಬಿಜೆಪಿಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡರು ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೂ ಕೂಡ ದೇಶಕ್ಕೆ ಪ್ರಧಾನಿಯಾಗಿದ್ದೆ. ಆಗ ಕಾಶ್ಮೀರದ ಸಮಸ್ಯೆಗಳನ್ನು ನಿವಾರಣೆಗೆ ಬೇಕಾದ ಕ್ರಮಗಳನ್ನು ಸಾಕಷ್ಟು ಕೈಗೊಂಡಿದ್ದೆ. ಈಗಿನ ಸರ್ಕಾರಕ್ಕೆ ಹಿಂದೆಂದಿಗಿಂತಲೂ ಭಾರೀ ಬಹುಮತವನ್ನು ಈ ದೇಶದ ಜನತೆ ನೀಡಿದ್ದಾರೆ. ಯಾವ ಪ್ರಧಾನಿಗೂ ಈ ರೀತಿಯ ಬಲವನ್ನು ನೀಡಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಮೋದಿಯವರು ಕೇವಲ ವಿರೋಧ ಪಕ್ಷದವರನ್ನು ಟೀಕಿಸುವುದರಲ್ಲಿಯೇ ಕಳೆದರು ಎಂದರು.
ಪ್ರಧಾನಿ ಮೋದಿ ಅವರು ಪ್ರಮುಖವಾಗಿ ಕಾಂಗ್ರೆಸ್ ಮತ್ತು ನೆಹರು ಅವರನ್ನು ಟೀಕಿಸುವುದಷ್ಟೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದಲ್ಲಿ ಮೂರು ಸರ್ಕಾರಗಳನ್ನ ಬದಲಾಯಿಸಲಾಗಿದೆ. ಕೊನೆಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, ಅನಂತರ ರಾಷ್ಟ್ರಪತಿ ಆಡಳಿತ ಹೇರಿದ್ದಾರೆ. ಅಲ್ಲಿಯ ಯುವಕರೆಲ್ಲ ಉದ್ಯೋಗ ಇಲ್ಲದೆ ಬೀದಿಗೆ ಇಳಿಯುವಂತೆ ಮಾಡಿದ್ದಾರೆ. ದೇಶದ ಇಂತಹ ಪರಿಸ್ಥಿತಿಯಲ್ಲಿ ಇರುವ ವೇಳೆ ಪ್ರಧಾನಿಯವರೆ ಇದು ವಿರೋಧ ಪಕ್ಷದವರನ್ನು ಟೀಕಿಸುವ ರೀತಿ ಉತ್ತಮ ಅಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv