ಗಣೇಶೋತ್ಸವದಲ್ಲಿ ಮೋದಿ ಮೂರ್ತಿಯನ್ನು ಇಟ್ಟು ಯುವಕರಿಂದ ಆರಾಧನೆ

Public TV
1 Min Read
ckd modi ganapa copy

ಬೆಳಗಾವಿ: ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಜ್ಯಕ್ಕೆ ಎಂದು ಕಂಡರಿಯದ ಪ್ರವಾಹ ಪರಿಸ್ಥಿತಿ ಬಂದ್ರೂ ಮೋದಿ ಸರ್ಕಾರ ರಾಜ್ಯಕ್ಕೆ ಒಂದು ರೂ. ಸಹಾಯ ಮಾಡಿಲ್ಲ ಎಂದು ಮೋದಿ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಆದರೆ ಮೋದಿ ಹವಾ ಮಾತ್ರ ಬೆಳಗಾವಿಯಲ್ಲಿ ಇನ್ನೂ ಕಡಿಮೆಯಾಗಿಲ್ಲ.

ವರ್ಷಕ್ಕೊಮ್ಮೆ ಆಚರಿಸುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಮೋದಿ ಮೂರ್ತಿಯನ್ನು ಇಟ್ಟು ಆರಾಧನೆ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಓಂ ಗಜಾನನ ಯುವಕ ಮಂಡಳ ವತಿಯಿಂದ 11 ದಿನಗಳ ಕಾಲ ಪ್ರಧಾನಿ ಮೋದಿ ಹಾಗೂ ಗಣೇಶ ಮೂರ್ತಿಯನ್ನು ಸಾರ್ವಜನಿಕವಾಗಿ ಇಟ್ಟು ಪೂಜೆ ಮಾಡಲಾಗುತ್ತಿದೆ.

ckd modi ganapa 1

ಪ್ರಧಾನಿ ಮೋದಿ ಗಣೇಶನನ್ನು ಕಮಲದಲ್ಲಿ ಎತ್ತಿ ಹಿಡಿದಿರುವ ಮೂರ್ತಿಯನ್ನು ಪೂಜೆ ಮಾಡಲಾಗುತ್ತಿದೆ. ಅಲ್ಲದೆ ಇದರ ಜೊತೆಗೆ ಆರ್ಟಿಕಲ್ 370 ಜೆ ಕಾನೂನು ರದ್ದು ಹಾಗೂ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿಯವರ ಸಾಧನೆಯನ್ನು ಬಿಂಬಿಸುವ ಫಲಕಗಳನ್ನು ನಿರ್ಮಾಣ ಮಾಡಿ ಜನರಲ್ಲಿ ಮೋದಿ ಸರ್ಕಾರದ ಸಾಧನೆಯನ್ನು ಬಿಂಬಿಸಲಾಗಿದೆ.

11 ದಿನಗಳ ಕಾಲ ನರೇಂದ್ರ ಮೋದಿ ಅವರ ಮೂರ್ತಿ ಹಾಗೂ ಅವರ ಸಾಧನೆಗಳನ್ನು ಬಿಂಬಿಸುವ ಕಾರ್ಯವನ್ನು ಹುಕ್ಕೇರಿಯ ಯುವಕರು ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *