ಮಂಗಳೂರು: ಮೋದಿ ಮತ್ತೆ ಪ್ರಧಾನಿಯಾಗಲು ಅಭಿಮಾನಿಗಳು ವಿವಿಧ ರೀತಿಯ ಹರಕೆ ಹೊತ್ತುಕೊಂಡಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿನ ದಂಪತಿ ಮೋದಿ ಪ್ರಧಾನಿಯಾಗಿದ್ದಕ್ಕಾಗಿ ಕಾಲ್ನಡಿಗೆಯಲ್ಲಿ 28 ಕಿಮೀ ಸಾಗಿ ದೇಗುಲ ದರ್ಶನ ಮಾಡಿದ್ದಾರೆ.
ಮಂಗಳೂರಿನ ಶಕ್ತಿನಗರದ ರಾಜೇಶ್ ದಂಪತಿ ಈ ಹರಕೆ ಹೊತ್ತವರಾಗಿದ್ದು, ನಗರದ ಹೊರವಲಯದಲ್ಲಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭಾನುವಾರ ಪಾದಯಾತ್ರೆ ಮಾಡಿದ್ದಾರೆ. ತಲೆಯಲ್ಲಿ ಅಕ್ಕಿಯ ಚೀಲ, ಕೈಯಲ್ಲಿ ಸೀಯಾಳ ಹಿಡಿದು ರಸ್ತೆಯುದ್ದಕ್ಕೂ ಪಾದಯಾತ್ರೆ ಮಾಡಿದ್ದಾರೆ.
ರಾಜೇಶ್ ಜೊತೆ ಪತ್ನಿ ಮತ್ತು ಮಗಳು ಸಾಥ್ ನೀಡಿದ್ದಾರೆ. ಪೊಳಲಿ ದೇವಸ್ಥಾನಕ್ಕೆ ತೆರಳಲು ರಸ್ತೆ ಇದ್ದರೂ, ಗುಡ್ಡ, ಬೆಟ್ಟಗಳ ರೀತಿಯ ಏರು ತಗ್ಗುಗಳಿವೆ. ಇಂಥದ್ದರಲ್ಲಿ ತಲೆಯಲ್ಲಿ ಭಾರ ಹೊತ್ತುಕೊಂಡು ರಾಜೇಶ್ ಕಷ್ಟಪಟ್ಟು ಹರಕೆ ತೀರಿಸಿದ್ದು ವಿಶೇಷವಾಗಿತ್ತು.