ಶಾಸಕ ಟಿ.ಡಿ ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್- ರೊಚ್ಚಿಗೆದ್ದ ಹಳ್ಳಿಗರು

Public TV
1 Min Read
CHIKKAMAGALURU COOKER

ಚಿಕ್ಕಮಗಳೂರು: ವಿಧಾನಸಭಾ ಚುನಾವಣಾ (Vidhanasabha Election) ದಿನಾಂಕ ಈಗಾಗಲೇ ಘೊಷಣೆಯಾಗಿದೆ. ಇದಕ್ಕೂ ಮೊದಲು ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದ ಮತದಾರರನ್ನು ಸೆಳೆಯಲು ಗಿಫ್ಟ್ ಗಳನ್ನು ಹಂಚಿದ್ದಾರೆ. ಆದರೆ ಇದೀಗ ಶೃಂಗೇರಿ ಶಾಸಕ (Sringeri MLA)ರೊಬ್ಬರು ಕೊಟ್ಟ ಗಿಫ್ಟ್ ನಿಂದ ಎಡವಟ್ಟಾಗಿದ್ದು, ಹಳ್ಳಿ ಮಂದಿ ರೊಚ್ಚಿಗೆದ್ದಿದ್ದಾರೆ.

CKM COOKER BLAST AV 5

ಹೌದು. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ (T.D Rajegowda) ತಮ್ಮ ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಂಚಿದ್ದರು. ಅಂತೆಯೇ ಕೊಪ್ಪ ತಾಲೂಕಿನ ಶಾನುವಳ್ಳಿಯ ದೇವರಾಜ್ ಎಂಬವರ ಮನೆಯಲ್ಲಿ ಶಾಸಕರು ಕೊಟ್ಟ ಕುಕ್ಕರ್ ನಲ್ಲಿ ತರಕಾರಿ ಬೇಯಿಸಲು ಇಟ್ಟಿದ್ದಾರೆ. ಆದರೆ ಅದು ಬ್ಲಾಸ್ಟ್ ಆಗಿದೆ. ತಾಯಿ-ಮಗು ಹೊರಗಡೆ ಇದ್ದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

CKM COOKER BLAST AV 2

ಶಾಸಕರು ಕೊಟ್ಟ ಕುಕ್ಕರ್ ಬ್ಲಾಸ್ಟ್ ಆಗಿರುವುದು ಸುದ್ದಿಯಾಗುತ್ತಿದ್ದಂತೆಯೇ ಹಳ್ಳಿ ಮಂದಿ ರೊಚ್ಚಿಗೆದ್ದಿದ್ದಾರೆ. ಕಳಪೆ ಕುಕ್ಕರ್ ನೀಡಿ ಕಾಂಗ್ರೆಸ್ ಜನರ ಜೀವಕ್ಕೆ ಅಪಾಯ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 450 ರೂ. ಕುಕ್ಕರ್ ಗೆ 1,399 ಲೇಬಲ್ ಅಂಟಿಸಿ ಕಾಂಗ್ರೆಸ್ ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಡಿಜೆ ಸೌಂಡ್ ನಿಲ್ಲಿಸಲು ಹೇಳಿದ್ದಕ್ಕೆ ಗರ್ಭಿಣಿ ಮೇಲೆ ಗುಂಡು ಹಾರಿಸಿದ ನೆರೆಮನೆಯಾತ

Share This Article