ಸುಮಲತಾ ಪರ ಬ್ಯಾಟ್ ಮಾಡಿ ಸಿಎಂಗೆ ಶಾಸಕ ಸುಧಾಕರ್ ಟಾಂಗ್!

Public TV
1 Min Read
ckb sudhakar 1

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕ ಸುಧಾಕರ್ ಅವರು ಸುಮಲತಾ ಅಂಬರೀಶ್ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಕಂಗಾನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಅವರು, “ನಟ, ರಾಜಕಾರಣಿ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಕಾವೇರಿ ನೀರಿಗಾಗಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನರ ಜೊತೆ ಇದ್ದವರು. ತಾವು ಇರೋವರೆಗೂ ತಮ್ಮ ಕುಟುಂಬದವರು ರಾಜಕೀಯಕ್ಕೆ ಬೇಡ ಎಂದು ಹೇಳಿದ್ದರು. ಆದರೆ ಈಗ ಶ್ರೀಮತಿ ಸುಮಲತಾರಲ್ಲಿ ನಟ ಅಂಬರೀಶ್ ಅವರನ್ನು ಜನ ಕಾಣುತ್ತಿದ್ದಾರೆ” ಎಂದು ಹೇಳಿದ್ದಾರೆ.

ckb sudhaka 2

ಜನರ ಒತ್ತಾಯಕ್ಕೆ ಮಣಿದು ಮಂಡ್ಯ ಜನಸೇವೆಗೆ ಸುಮಲತಾ ಬರುತ್ತಿದ್ದು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು. ಸುಮಾಲತಾರ ನಿರ್ಧಾರವನ್ನು ಸ್ವಾಗತಿಸಿ ಬೆಂಬಲಿಸುವುದರ ಮೂಲಕ ಸರ್ವಾನುಮತದಿಂದ ಕ್ಷೇತ್ರ ಬಿಟ್ಟು ಕೊಡಬೇಕು. ಹೀಗೆ ಮಾಡಿದರೆ ಮಂಡ್ಯದ ಜನರಿಗೆ ಗೌರವ ಕೊಟ್ಟಂತಾಗುತ್ತೆ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಸುಧಾಕರ್ ಟಾಂಗ್ ನೀಡಿದ್ದಾರೆ.

ಇದೇ ವೇಳೆ ಹಾಸನಕ್ಕೆ ದೇವೇಗೌಡರು, ಮಂಡ್ಯಕ್ಕೆ ಸುಮಲತಾ ಅವರೇ ಬೆಸ್ಟ್ ಎಂದು ಸುಮಲತಾರ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ದೇವೇಗೌಡರು ಕರ್ಮ ಭೂಮಿ ಹಾಸನ. ತಮ್ಮ ಅಂತೀಮ ರಾಜಕೀಯ ಹೋರಾಟದಲ್ಲಿ, ತಮ್ಮ ಕರ್ಮಭೂಮಿ ಹಾಸನವನ್ನು ಬಿಟ್ಟು. ಬೇರೆ ಕಡೆ ಲೋಕಸಭಾ ಚುನಾವಣೆಗೆ ಪಲಾಯನ ಮಾಡುವುದು ಸರಿಯಲ್ಲ. ಅವರು ಹಾಸನದಿಂದಲೇ ಸ್ಪರ್ಧೆ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *