ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದಲ್ಲಿ ತಂದೆ-ತಾತನನ್ನ ನೋಡಿ ಮಂತ್ರಿ ಸ್ಥಾನ ಕೊಡುವ ಪರಿಸ್ಥಿತಿ ಇದೆ. ಈ ರೀತಿ ನೋಡಿ ಮಂತ್ರಿ ಸ್ಥಾನ ಕೊಟ್ಟರೇ ದೇಶದಲ್ಲಿ ಯುವ ನಾಯಕತ್ವವವನ್ನು ಸೃಷ್ಠಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸ್ಥಾನ ವಂಚಿತ ಶಾಸಕ ಸುಧಾಕರ್ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಇಂದು ನಗರದಲ್ಲಿ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಜೂನ್ 15 ರಂದು 20 ರಿಂದ 30 ಮಂದಿ ಸಮಾನ ಮನಸ್ಕ ಶಾಸಕರು ಸಭೆ ಸೇರಲಿದ್ದೇವೆ. ಹೈಕಮಾಂಡ್ ನ ನಾಯಕರು ಎಲ್ಲಿ ಎಡವಿದ್ದಾರೆ ಎಂದು ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಪಕ್ಷವನ್ನು ದೇಶದಲ್ಲಿ ಬೆಳೆಸಬೇಕಾದರೆ ಯಾವ ನಾಯಕರಲ್ಲಿ ಸೇವಾ ಮನೋಭಾವ, ಅರ್ಹತೆ, ಸಾಮಥ್ರ್ಯ ಎಂಬ ನಾಯಕರನ್ನು ಗುರುತಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಇದೇ ವೇಳೆ ತಮ್ಮ ನಡೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷವನ್ನ ಸದೃಢವಾಗಿ ಕಟ್ಟುವ ನಿರ್ಧಾರವಾಗಿದೆ. ಪಕ್ಷದ ನಾಯಕರು ಎಲ್ಲಿ ಎಡವಿದ್ದಾರೆ ಎಂಬುವುದು ಮನದಟ್ಟು ಮಾಡಿಸುವುದು ಮುಖ್ಯ ಎಂದು ಹೇಳಿ ಕ್ಷೇತ್ರದಲ್ಲಿ ಮತ ನೀಡಿದ ಗೆಲ್ಲಿಸಿಕೊಟ್ಟ ಎಲ್ಲಾ ಮತದಾರರಿಗೂ ಕೃತಜ್ಞತೆ ತಿಳಿಸಿದರು. ಇನ್ನೂ ಇದೇ ಸಮಾರಂಭದಲ್ಲಿ ಮಾಜಿ ಶಾಸಕ ಶಿವಾನಂದ್, ಸುಧಾಕರ್ ಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ಸಿನಿಮಾ ಡೈಲಾಗ್ ಗಳ ಮೂಲಕ ವ್ಯಂಗ್ಯವಾಗಿ ಟೀಕಿಸಿದರು.