ಬೆಂಗಳೂರು: ನಟಿ, ಆಂಧ್ರಪ್ರದೇಶ ಶಾಸಕಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ದೋಷದಿಂದ ಬೆಂಗಳುರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ರೋಜಾ, ಟಿಡಿಪಿ ಶಾಸಕ ವೇಗುಳ್ಳಿ ಜೋಗೇಶ್ವರ ರಾವ್, ಮಾಜಿ ಸಚಿವ ಯನಮ ರಾಮಕೃಷ್ಣಡು ಸೇರಿಂದತೆ 70 ಮಂದಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾವು ನಿನ್ನೆ ಬೆಳಗ್ಗೆ ರಾಜಮಂಡ್ರಿಯಿಂದ ಹೊರಟಿದೆ. ಬೆಳಗ್ಗೆ 10.30ಕ್ಕೆ ತಿರುಪತಿ ತಲುಪಬೇಕಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡು ಹಿನ್ನೆಲೆ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್ ಮಡಲಾಗಿದೆ.
4ಗಂಟೆಗಳಾದರೂ ಪ್ರಯಾಣಿಕರನ್ನು ವಿಮಾನದಲ್ಲಿಯೇ ಕಾಯಿಸಲಾಗಿದ್ದು, ಸೂಕ್ತ ಮಾಹಿತಿ ನೀಡದೆ ಗೊಂದಲ ಸೃಷ್ಟಿಮಾಡಲಾಗಿದೆ. ಬಳಿಕ ರಸ್ತೆ ಮಾರ್ಗವಾಗಿ ಕೆಲ ಪ್ರಯಾಣಿಕರು ತಿರುಪತಿಗೆ ತೆರಳಿದ್ದಾರೆ.
ರೋಜಾ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 4 ಗಂಟೆಗಳಾದರೂ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದೆ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಮೊದಲು ಹವಾಮಾನ ವೈಪರೀತ್ಯ ಎಂದರು. ನಂತರ ತಾಂತ್ರಿಕ ದೋಷ ಎಂದರು. ನಾನು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, 5 ಗಂಟೆ ಒಂದೇ ಕಡೆ ಕುಳಿತು ಆಯಾಸವಾಗಿದೆ. ವಿಮಾನ ಕಂಪನಿ ಪ್ರಯಾಣಿಕರ ಕಾಳಜಿ ವಹಿಸಿಲ್ಲ ಎಂದು ಕಿಡಿಕಾರಿದ್ದಾರೆ.