ಸಿಎಂ ಎಚ್‍ಡಿಕೆ ವಿರುದ್ಧ ಶಾಸಕ ರೇಣುಕಾಚಾರ್ಯ ಕೆಂಡಾಮಂಡಲ

Public TV
2 Min Read
RENUKACHARYA

– ಎಚ್‍ಡಿಕೆಗೆ ಗೌರವವಿದ್ರೆ ಗೌಪ್ಯತೆ ಕಾಪಾಡಲಿ

ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈನಿಂಗ್ ವಿಚಾರದಲ್ಲಿ ಎಸ್‍ಐಟಿಯನ್ನು ರಾಜಕೀಯ ದುರ್ಬಳಕೆಗೋಸ್ಕರ ರಚನೆ ಮಾಡಿದ್ರು. ಅಂದು ಕುಮಾರಸ್ವಾಮಿಯವರೇ ಎಸ್‍ಐಟಿಯನ್ನು ವಿರೋಧಿಸಿದ್ದರು. ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಮಾಡಿಸಿದ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿರುತ್ತಾರೆ. ಆರೋಪಿ ಕೈಕೆಳಗೆ ಎಸ್‍ಐಟಿ ಕೊಟ್ಟರೆ ಕಳ್ಳರ ಕೈಗೆ ಮನೆ ಕೀ ಕೊಟ್ಟಂತೆ ಆಗುತ್ತದೆ ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸದನದಲ್ಲಿ ಇಂದು ಕೂಡ ಇದೇ ವಾದ ಮಾಡುತ್ತೇವೆ. ಎಸ್‍ಐಟಿ ತನಿಖೆಗೆ ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಸಭಾಧ್ಯಕ್ಷರು ಸಭೆ ಕರೆದಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿಯ ಮುಖಂಡರು, ಹಿರಿಯ ಶಾಸಕರು ಭಾಗವಹಿಸಿದ್ದಾರೆ. ಯಾವ ರೀತಿಯಲ್ಲಿ ಅಲ್ಲಿ ನಿರ್ಧಾರವಾಗುತ್ತದೆ. ಅದರ ನಂತರ ನಮ್ಮ ನಾಯಕರು ಏನ್ ಸೂಚನೆ ಕೊಡುತ್ತಾರೆ ಅದರ ಪ್ರಕಾರ ನಾವು ಎಸ್‍ಐಟಿಯನ್ನು ಪ್ರಬಲವಾಗಿ ವಿರೋಧ ಮಾಡುತ್ತೇವೆ ಎಂದು ಹೇಳಿದ್ರು.

M.P.Renukacharya

ಇದೂವರೆಗೂ ನಾನು ಸಭಾಧ್ಯಕ್ಷರಿಗೆ ಆರೋಪ ಮಾಡಿಲ್ಲ. ಕುಮಾರಸ್ವಾಮಿಯವರು ರಮೇಶ್ ಕುಮಾರ್ ವಿರುದ್ಧ ಯಾವ ರೀತಿಯ ಶಬ್ಧಗಳನ್ನು ಬಳಸಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ದಾಖಲೆ ಇದೆ. ಸಭಾಧ್ಯಕ್ಷರ ಪೀಠದ ಗೌರವವನ್ನು ಎತ್ತಿ ಹಿಡಿಯೋದಕ್ಕೋಸ್ಕರ ವಿಚಾರಗಳನ್ನು ಚರ್ಚೆ ಮಾಡಲ್ಲ. ಅಧಿವೇಶನದ ಹೊರಗಡೆ ನಡೆದಿರುವಂತಹ ಚರ್ಚೆಗಳಾಗಿವೆ. ಕುಮಾರಸ್ವಾಮಿಯವರಿಗೆ ನಿಜವಾಗಲೂ ಸ್ಪೀಕರ್ ರಮೇಶ್ ಕುಮಾರ್ ಪೀಠದ ಬಗ್ಗೆ ಗೌರವವಿದ್ದರೆ ಗೌಪ್ಯತೆಯನ್ನು ಕಾಪಾಡಿ ನೇರವಾಗಿ ಸಭಾಧ್ಯಕ್ಷರನ್ನು ಭೇಟಿ ಮಾಡಿ ಅಲ್ಲಿ ದೂರನ್ನು ಕೊಡಬೇಕಾಗಿತ್ತು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ರು.

Ramesh kumar M. P. Renukacharya

ಪ್ರಕರಣದ ಬಗ್ಗೆ ನಮಗೇನೂ ಭಯವಿಲ್ಲ, ಹುಳುಕಿಲ್ಲ. ಕುಮಾರಸ್ವಾಮಿಯವರು ಏನೇನ್ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ. 16 ಜನ ಶಾಸಕರನ್ನು ಗೋವಾಕ್ಕೆ ಹೈಜಾಕ್ ಮಾಡಿಲ್ಲವೇ? ಅಲ್ಲಿ ಏನೇನ್ ಮಾತಾಡಿದ್ದರೆ ಎಂದು ನನ್ನ ಬಳಿ ಬರಲಿ. ಬಹಿರಂಗ ಸವಾಲು ಹಾಕುತ್ತೇನೆ. ನಾನು ಗೋವಾದಲ್ಲಿದ್ದೆ. ರಾಜಕಾರಣದಲ್ಲಿ ಇವರೆಲ್ಲ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಮಾಡಬಾರದದ್ದನ್ನು ಮಾಡಿದ್ದಾರೆ. ಇವರಿಗೆ ಎಷ್ಟು ಆಸ್ತಿಯಿತ್ತು. ಅವರು ಹುಟ್ಟದುಕ್ಕಿಂತ ಮುಂಚೆ ಭೂಮಿ ಇತ್ತಾ? ಇವರ ಕುಟುಂಬ ಯಾವ ರೀತಿ ಇತ್ತು..? ಹಾಸನ ಹಾಗೂ ಹೊಳೆನರಸೀಪುರ ಜನರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ ರೇಣುಕಾಚಾರ್ಯ, ಕುಮಾರಸ್ವಾಮಿಯವರು ಇಂದು ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಸಲ್ಲಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿಯವರೇ ಮೊದಲನೆ ಆರೋಪಿ ಎಂದು ಅವರು ಸಿಎಂ ವಿರುದ್ಧ ಕೆಂಡಾಮಂಡಲರಾದ್ರು.

HDK speaker Ramesh kumar

ಈ ಸರ್ಕಾರ, ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇಲಲದಿರುವುದರಿಂದ ಅವರು ಹೋಗಿರುವುದನ್ನು ಬಿಜೆಪಿ ಪಕ್ಷದ ಹಣೆಗೆ ಕಟ್ಟಲು ಬರುತ್ತಾರೆ. ನಾವು ಸರ್ಕಾರ ರಚನೆಗೆ ಕೈ ಹಾಕಿಲ್ಲ. 104 ಶಾಸಕರ ಜನಾದೇಶ ನಮ್ಮ ಪರವಾಗಿದೆ. ಈ ಕಾಂಗ್ರೆಸ-ಜೆಡಿಎಸ್ ವಿರುದ್ಧವಾಗಿದೆ ಎಂದು ಗರಂ ಆದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *