Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯಾವುದೇ ಬೌಲಿಂಗ್ ಬಂದರೂ ಉತ್ತಮ ಸ್ಕೋರ್ ಮಾಡ್ತೇನೆ – ಪ್ರೀತಂ ಗೌಡ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಯಾವುದೇ ಬೌಲಿಂಗ್ ಬಂದರೂ ಉತ್ತಮ ಸ್ಕೋರ್ ಮಾಡ್ತೇನೆ – ಪ್ರೀತಂ ಗೌಡ

Districts

ಯಾವುದೇ ಬೌಲಿಂಗ್ ಬಂದರೂ ಉತ್ತಮ ಸ್ಕೋರ್ ಮಾಡ್ತೇನೆ – ಪ್ರೀತಂ ಗೌಡ

Public TV
Last updated: March 23, 2023 11:34 am
Public TV
Share
3 Min Read
Preetham J Gowda
SHARE

ಹಾಸನ: ಯಾವುದೇ ಬೌಲಿಂಗ್ (Bowling) ಬಂದರೂ ಉತ್ತಮ ಸ್ಕೋರ್ (Score) ಕೊಡುವ ಪ್ರಯತ್ನ ಮಾಡುತ್ತೇನೆ. ರಾಜ್ಯದ ಜನ ತಿರುಗಿ ನೋಡುವಂತೆ ಫಲಿತಾಂಶ ಕೊಡಲು ಜನ ತಯಾರಾಗಿದ್ದಾರೆ ಎಂದು ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಜೆಡಿಎಸ್ (JDS) ಗೆಲ್ಲುತ್ತದೆ ಎಂಬ ಹೆಚ್.ಡಿ.ರೇವಣ್ಣನವರ (H.D.Revanna) ಹೇಳಿಕೆಗೆ ಶಾಸಕ ಪ್ರೀತಂ ಗೌಡ (Preetham Gowda) ಟಾಂಗ್ (Tong) ನೀಡಿದ್ದಾರೆ.

ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಏಳಕ್ಕೆ ಏಳು ಕ್ಷೇತ್ರ ಗೆಲ್ಲಲೇಬೇಕು. ಆದರೆ ಜೆಡಿಎಸ್ ಎಷ್ಟು? ಬಿಜೆಪಿ (BJP) ಎಷ್ಟು? ಕಾಂಗ್ರೆಸ್ (Congress) ಎಷ್ಟು ಎಂದು ಫಲಿತಾಂಶದ ದಿನ ಗೊತ್ತಾಗುತ್ತದೆ. ವಿಪಕ್ಷಗಳು ಹಾಸನ ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮಗೊಳಿಸಲಿಲ್ಲ. ನಮ್ಮ ಟಿಕೆಟ್ ಕೂಡ ರಾಷ್ಟ್ರೀಯ ನಾಯಕರು ಇನ್ನೂ ಘೋಷಣೆ ಮಾಡಿಲ್ಲ. ಎಲ್ಲದಕ್ಕೂ ಕಾಯುತ್ತಿದ್ದೇವೆ ಎಂದರು. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

HD REVANNA

ಅಖಾಡದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂದು ನಿರ್ಧಾರವಾದ ಮೇಲೆ ಕಾವೇರುತ್ತದೆ. ನಂತರ ಸ್ಪೀಡ್ ಬೌಲರ್‌ಗೆ ಯಾವರೀತಿಯಾಗಿ ಫುಟ್ ಹಾಕಬೇಕು. ಸ್ಪಿನ್, ಮೀಡಿಯಂ ಪೇಸರ್ ಆದರೆ ಹೇಗೆ ಆಡಬೇಕು ಎಂದು ವರ್ಕೌಟ್ ಮಾಡಿದ್ದೇನೆ. ಯಾವ ಬೌಲರ್ ಬರುತ್ತಾರೆ ಎಂದು ನೋಡಿ, ಪವರ್ ಪ್ಲೇ ಹೇಗೆ ಆಡಬೇಕು, ಸ್ಲ್ಯಾಗ್ ಓವರ್ ಹೇಗೆ ಆಡಬೇಕು, ಮಧ್ಯದಲ್ಲಿ ಹೇಗೆ ಆಡಬೇಕು ಎಂದು ನೋಡುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ

ರೇವಣ್ಣ ಸ್ಪರ್ಧೆ ಮಾಡಿದರೆ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಸವಾಲು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನದೇನಿಲ್ಲ. ಜನರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧ. ಆಗ ನಾನು ಶಾಸಕನಾಗಿ ಅಭಿವೃದ್ಧಿ ವಿಚಾರ ಬಂದಾಗ ಮಾತನಾಡುತ್ತಿದ್ದೆ. ಆದರೆ ಈಗ ಅಭ್ಯರ್ಥಿಯಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಎಷ್ಟು ಸಾವಿರದಲ್ಲಿ ಗೆಲ್ಲಿಸುತ್ತಾರೆ ಎಂದು ಜನರು ತೀರ್ಮಾನ ಮಾಡುತ್ತಾರೆ. ನಾನು ಅದರ ಬಗ್ಗೆ ಮಾತನಾಡಿದರೆ ಅಪ್ರಸ್ತುತ ಆಗುತ್ತದೆ. ಈ ಕುರಿತು ಚುನಾವಣೆ (Election) ಸಮಯದಲ್ಲಿ ಮತದಾರರು ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಕ್ಷೇತ್ರ ಆಯ್ಕೆಯಲ್ಲಿ ಗೊಂದಲ: ಸಿದ್ದು ಪತ್ನಿ ಹೇಳಿದ್ದೇನು? ಪುತ್ರ ಹೇಳಿದ್ದೇನು? 

Preetham Gowda 2

ಅಭಿವೃದ್ಧಿ ಕಾಮಗಾರಿಗೆ ತೊಡಕು ಮಾಡಿದ್ದರಿಂದ ಆ ಉತ್ತರ ಕೊಟ್ಟಿದ್ದೆ. ನಾನು ಅಂದು ಕೊಟ್ಟಿದ್ದ ಹೇಳಿಕೆಯನ್ನು ಜನರು ಗಮನಿಸಿದ್ದಾರೆ. ಪ್ರೀತಂಗೌಡ ಸರಿಯಾಗಿ ಹೇಳಿದ್ದಾನೆ ಎಂದರೆ ಜನ ಸಾಮಾನ್ಯರೇ ಅದನ್ನು ಮಾಡುತ್ತಾರೆ. ನನ್ನದು ಯೂಟರ್ನ್ ಇಲ್ಲವೇ ಇಲ್ಲ. ನೇರವಾಗಿ ಹೋಗುವುದೇ ನನ್ನ ಕೆಲಸ. ನೇರವಾಗಿ ಹೋಗುವಾಗ ಹಂಪ್ಸ್ ಬಂದರೆ ಸ್ಲೋ ಮಾಡಬೇಕು. ಟ್ರಾಫಿಕ್ ಸಿಗ್ನಲ್ ಬಂದಾಗ 30 ಸೆಕೆಂಡ್ ನಿಂತು ಮುಂದೆ ಹೊರಡಬೇಕು. ಗುರಿ ನಿಚ್ಚಳವಾಗಿದೆ. ಗುರು ಮೋದಿಯವರ (Narendra Modi) ಮಾರ್ಗದರ್ಶನ ಕೂಡ ಸರಿಯಾಗಿದೆ. ಹಾಗಾಗಿ ಯೂಟರ್ನ್ ಇಲ್ಲಾ. ಲೆಫ್ಟ್, ರೈಟ್ ಇಲ್ಲ. ನೇರ ಹೋಗೋದೆ ಎಂದು ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರನಿಗೆ ನೋಟಿಸ್

ರೇವಣ್ಣ ತಮ್ಮ ವಿರುದ್ದ ಸ್ಪರ್ಧೆ ಮಾಡಿದರೆ 49,999 ಮತಗಳ ಅಂತರದಲ್ಲಿ ಗೆದ್ದು ಐವತ್ತು ಸಾವಿರಕ್ಕೆ ಒಂದೇ ಮತ ಕಡಿಮೆಯಾದರೂ ರಾಜಿನಾಮೆ ನೀಡುವ ಸವಾಲು ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ಈ ಸವಾಲಿಗೆ ಕಂಡಿಷನ್ ಅಪ್ಲೈ ಇದೆ. ಯಾರು ಅಭ್ಯರ್ಥಿ ಆಗುತ್ತಾರೆ ಬರಲಿ. ಫೀಲ್ಡ್ ರೆಡಿಯಾಗಲಿ. ನಾವು ಯಾರು ಬಂದರೂ ಗೆಲ್ಲತ್ತೇನೆ, ಯಾರು ಬಂದರೂ ಐವತ್ತು ಸಾವಿರ ಲೀಡ್ ಎಂದು ನಾನು ಮಾತೇ ಆಡಲಿಲ್ಲ. ನನಗೆ ನೀವು ಸಮಸ್ಯೆ ಮಾಡುತ್ತಿದ್ದೀರಿ. ಇದನ್ನು ಜನರ ಮುಂದೆ ಹೇಳುತ್ತೇನೆ ಅಂತಾ ಹೇಳಿದ್ದೆ. ನೀವು ಅಭಿವೃದ್ಧಿ ಮಾಡಲು ಬಿಡುತ್ತಿಲ್ಲ. ಫುಡ್ ಕೋರ್ಟ್, ಆಟೋ ಸ್ಟ್ಯಾಂಡ್ ಮಾಡಲು ಬಿಡುತ್ತಿಲ್ಲ. ರಸ್ತೆ- ಪಾರ್ಕ್ ಮಾಡಲು ಬಿಡುತ್ತಿಲ್ಲ. ಇವೆಲ್ಲಾ ತೊಂದರೆ ಕೊಡುತ್ತಿರುವ ನೀವೇನಾದರೂ ಬಂದರೆ ನೀವು ಮಾಡಿರುವ ಸಮಸ್ಯೆಗಳನ್ನು ಹಾಸನದ ಜನರ ಮುಂದೆ ಹೇಳುತ್ತೇನೆ ಎಂದಿದ್ದೆ. ಅವರು ನಿಮ್ಮನ್ನು ಐವತ್ತು ಸಾವಿರ ಹಿನ್ನಡೆ ಮಾಡುತ್ತಾರೆ ಎಂದು ಹೇಳಿದ್ದೆ. ಅದಕ್ಕೆ ಈಗಲು ಬದ್ಧನಾಗಿದ್ದೇನೆ. ಅವರು ಬಂದು ನಿಂತ ಮೇಲೆ ನಾನು ಕಮೆಂಟ್ ಮಾಡುತ್ತೇನೆ. ಅಂತೆ ಕಂತೆಗಳಿಗೆ ಉತ್ತರ ಕೊಡುವುದಿಲ್ಲ ಎಂದರು. ಇದನ್ನೂ ಓದಿ: ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

TAGGED:bjpcongresselectionh d revannahassanjdsPreetham gowdaಕಾಂಗ್ರೆಸ್ಚುನಾವಣೆಜೆಡಿಎಸ್ಪ್ರೀತಂ ಗೌಡಬಿಜೆಪಿಹಾಸನಹೆಚ್‌.ಡಿ.ರೇವಣ್ಣ
Share This Article
Facebook Whatsapp Whatsapp Telegram

Cinema news

Thalapathy Vijay 2
ಮಲೇಷಿಯಾದಲ್ಲಿ ಶನಿವಾರ ‘ಜನನಾಯಗನ್’ ಆಡಿಯೋ ಲಾಂಚ್‌
Cinema Latest South cinema
dhurandhar movie competes with toxic
ಟಾಕ್ಸಿಕ್‍ಗೆ ದುರಂಧರ್ ಎದುರಾಳಿ..!
Cinema Latest Sandalwood Top Stories
raghu wife birthday bigg boss
Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಘು ಪತ್ನಿ ಬರ್ತ್‌ಡೇ; ಸರ್ಪ್ರೈಸ್‌ಗೆ ಕಣ್ಣೀರಿಟ್ಟ ರಘು
Cinema Latest Top Stories TV Shows
Darshan vijayalakshmi 1
ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲ ಕಾಮೆಂಟ್ – ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರಿಂದ 3 ವಿಶೇಷ ತಂಡ
Cinema Crime Latest Sandalwood Top Stories

You Might Also Like

05
Districts

ರಾಜ್ಯದ 15ಕ್ಕೂ ಹೆಚ್ಚು ಬಸ್‌ಗಳು ಲಾಕ್‌; ತಮಿಳುನಾಡು ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದ ಕರ್ನಾಟಕ ಭಕ್ತರ ಪರದಾಟ!

Public TV
By Public TV
7 hours ago
Mysuru Blast
Crime

ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ – ಮತ್ತೋರ್ವ ಗಾಯಾಳು‌ ಲಕ್ಷ್ಮಿ ಸಾವು

Public TV
By Public TV
7 hours ago
France Tourist
Bellary

ಗುಡ್ಡ ಹತ್ತಲು ಹೋಗಿ ಜಾರಿ ಬಿದ್ದಿದ್ದ ವಿದೇಶಿ ಪ್ರಜೆ – ಬಿದ್ದಲ್ಲೇ 2 ದಿನ ನರಳಾಡಿದ್ದವನನ್ನು ರಕ್ಷಿಸಿದ ಪೊಲೀಸರು

Public TV
By Public TV
9 hours ago
kea
Bengaluru City

ಜನವರಿ 10, 12ರ ಬದಲಿಗೆ ಜ.18ಕ್ಕೆ ನೇಮಕಾತಿ ಪರೀಕ್ಷೆ – ಕೆಇಎ

Public TV
By Public TV
9 hours ago
Children below the age of 18 will now need parental consent to open social media accounts
Court

16 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌ ಮಾಡಿ – ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸಲಹೆ

Public TV
By Public TV
9 hours ago
Syria Mosque Blast
Crime

ಸಿರಿಯಾ | ನಮಾಜ್‌ ವೇಳೆ ಮಸೀದಿಯಲ್ಲಿ ಬಾಂಬ್‌ ಸ್ಫೋಟ – 8 ಸಾವು, 18 ಮಂದಿಗೆ ಗಾಯ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?