ನಾನು ಕ್ಷಮೆಯಾಚಿಸುತ್ತೇನೆ, ಕ್ಷೇತ್ರದ ಮಾಲೀಕರಿಗೆ ಕಾರ್ಮಿಕರನ್ನು ಬೈಯುವ ಹಕ್ಕಿದೆ – ಪ್ರತಾಪ್ ಸಿಂಹ

Public TV
1 Min Read
pratap simha 5

ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಲೇ ಪ್ರವಾಹ ಸಮಸ್ಯೆ ಎದುರಾಗಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಇಂದು ಸಂಸದ ಪ್ರತಾಪ್‌ಸಿಂಹ ದಶಪಥ ಕಾಮಗಾರಿಯ ಪರಿಶೀಲಿಸಿದ್ದಾರೆ.

Pratap Simha National Highway Visit

ಬಳಿಕ ಮಾತನಾಡಿರುವ ಅವರು, ರಾಮನಗರದಲ್ಲಿ ನಾಲೆಗಳು ಒತ್ತುವರಿ ಆಗಿದ್ದರಿಂದ ನೀರು ಜಾಸ್ತಿ ಹರಿದು ರಸ್ತೆಯಲ್ಲಿ ನಿಂತಿದೆ. ಅದಕ್ಕೆ ನಾನು ಜನರ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಳೆ ಬಂದಾಗ ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದರೆ ದಂಡ

ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ನನ್ನ ಬೈತಾ ಇದ್ರು. ಈಗ ಕುಮಾರಣ್ಣ ಬೈತಾ ಇದಾರೆ. ನಾನು ಒಂದು ರೀತಿ ಕೆಲಸದವನು, ನಾನೊಬ್ಬ ಕಾರ್ಮಿಕ. ಯಾರ್ಯಾರು ಈ ಕ್ಷೇತ್ರದ, ರಾಜ್ಯದ ಮಾಲೀಕರು ಅನ್ಕೊಂಡಿದಾರೊ ಅವರಿಗೆ ಕಾರ್ಮಿಕರನ್ನ ಬೈಯ್ಯುವಂತ ಹಕ್ಕಿದೆ. ಅದರಿಂದ ನನಗೇನೂ ಬೇಸರ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನುಡಿದಂತೆ ನಡೆಯುವವರು ಯೋಗಿ ಆದಿತ್ಯನಾಥ್ – ಬೊಮ್ಮಾಯಿ

ನೀರು ನಿಂತ ಬಗ್ಗೆ ಅಧ್ಯಯನ ಮಾಡಲು ಡೆಲ್ಲಿ, ಕರ್ನಾಟಕ ತಜ್ಞರನ್ನು ಕರೆದುಕೊಂಡು ಬಂದಿದ್ದೇನೆ. ಎಲ್ಲ ಕಡೆ ಪರಿಶೀಲನೆ ನಡೆಯುತ್ತಿದೆ. ಹೊಸ ರಸ್ತೆ ಮಾಡುವಾಗ ಸಹಜವಾಗಿ ಸವಾಲು ಸೃಷ್ಟಿ ಆಗುತ್ತೆ. ಈಗ ಅದನ್ನ ಪರಿಹರಿಸಿದ್ದೇವೆ. ಮಾನ್ಯ ಕುಮಾರಣ್ಣ ಎಲ್ಲಿ ಕಳಪೆ ಆಗಿದೆ ಹೇಳಿ ನೀವೆ ಖುದ್ದಾಗಿ ಬಂದು ಒಂದು ಟೀಂ ಕರೆತಂದು ಮೂರನೇ ವ್ಯಕ್ತಿಯಿಂದ ಪರಿಶೀಲನೆ ಮಾಡಿಸಿ. ಎಲ್ಲಿ ಕಳಪೆ ಅವೈಜ್ಞಾನಿಕ ಹೇಳಿದರೆ ನಾವೂ ಸರಿಪಡಿಸುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *