ಸಿಎಂ ಎದುರೇ ಆಪ್ತ ಮಹದೇವಪ್ಪಗೆ ಕೈ ಶಾಸಕ ಕ್ಲಾಸ್!

Public TV
1 Min Read
HC MAHADEVAPPA

– ನರೇಂದ್ರಸ್ವಾಮಿ ಸಮಾಧಾನ ಮಾಡಿದ ಸಿಎಂ

ಬೆಂಗಳೂರು: ಮುಖ್ಯಮಂತ್ರಿಗಳ ಎದುರೇ ಹೆಚ್.ಸಿ.ಮಹದೇವಪ್ಪ (H.C Mahadevappa) ವಿರುದ್ಧ ಕಾಂಗ್ರೆಸ್ ಶಾಸಕ ಗರಂ ಆದ ಘಟನೆ ನಡೆದಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮುಂದೆಯೇ ಸಮಾಜ ಕಲ್ಯಾಣ ಇಲಾಖೆ ನಡೆ ಬಗ್ಗೆ ಶಾಸಕ ನರೇಂದ್ರಸ್ವಾಮಿ ಗರಂ ಆಗಿದ್ದು, ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶುಕ್ರವಾರ ಎಸ್ ಸಿ, ಎಸ್ ಟಿ ಉಪಯೋಜನೆಗಳ ಪರಿಷತ್ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಯೋಜನೆಗಳ ಅನುಷ್ಠಾನ, ನಿಯಮಾವಳಿಗಳ ವಿಚಾರದಲ್ಲಿ ಜಟಾಪಟಿ ನಡೆದಿದೆ. ಈ ವೇಳೆ ಶಾಸಕ ನರೇಂದ್ರಸ್ವಾಮಿಯವರು (Narendraswamy) ಸಚಿವ ಹೆಚ್.ಸಿ.ಮಹದೇವಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

NARENDRASWAMY

ಸಮಾಜ ಕಲ್ಯಾಣ ಇಲಾಖೆಯ ಕೆಲವು ನಡವಳಿಕೆ ಸರಿಪಡಿಸಿಕೊಳ್ಳುವಂತೆ ನರೇಂದ್ರಸ್ವಾಮಿ ಗರಂ ಆದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಶಾಸಕರನ್ನು ಸಮಾಧಾನಪಡಿಸಿ ಬಳಿಕ ಸರಿಪಡಿಸುವ ಭರವಸೆ ನೀಡಿದರು. ಆ ಬಳಿಕ ಸುದ್ದಿಗೋಷ್ಟಿ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಅವರು ನರೇಂದ್ರಸ್ವಾಮಿ ಹೆಸರನ್ನು ಪದೇ ಪದೇ ಪ್ರಸ್ತಾಪಿಸಿದ್ದರು.

Share This Article