ಕುಮಾರಣ್ಣ, ಡಿಕೆಶಿ ಇವರಿಬ್ಬರೂ ಮೈಸೂರು ರಾಜ ಲಾಂಛನ ಗಂಡಭೇರುಂಡದ ಹಾಗೆ: ಶಾಸಕ ಮುನಿರತ್ನ

Public TV
1 Min Read
mnd muniratna

ಮಂಡ್ಯ: ನಿಖಿಲ್‍ಗಿಂತ ನಮಗೆ ಬೇರೆ ಯಾವ ಅಭ್ಯರ್ಥಿಯೂ ಬೇಡ ಎಂದು ಇಂದೇ ಶಪಥ ಮಾಡಿ ಎಂದು ಮಂಡ್ಯ ಜನರಿಗೆ ಶಾಸಕ ಮುನಿರತ್ನ ಕರೆ ನೀಡಿದ್ದಾರೆ.

ನಿಖಿಲ್ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಶಾಸಕ ಮುನಿರತ್ನ ಅವರು, ಇಂದು ಸುವರ್ಣಾಕ್ಷರಗಳ್ಲಿ ಬರೆಯೋ ದಿನ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಣ್ಣ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ನಿಖಿಲ್ ಗಿಂತ ಇನ್ಯಾರು ನಮಗೆ ಬೇಡ ಎಂದು ಇಂದೇ ಶಪಥ ಮಾಡಿ. ಮತ ಹಾಕೋವರೆಗೂ ಈ ಕೂಗು ಹೀಗೆ ಇರಲಿ ಎಂದರು.

MND2

ನಿಖಿಲ್ ಕಪಟ ನಾಟಕ ಗೊತ್ತಿರದ ಹುಡುಗ. ನಿಖಿಲ್ ಗೆಲ್ಲಿಸೋಕೆ ಇಂದೇ ತೀರ್ಮಾನ ಮಾಡಿ ಎಂದು ಶಾಸಕ ಮುನಿರತ್ನ ಕರೆ ನೀಡಿದರು. ಕುಮಾರಣ್ಣ ಮತ್ತು ಡಿ.ಕೆ ಶಿವಕುಮಾರ್ ಇಬ್ಬರನ್ನೂ ಒಮ್ಮೆ ಸರಿಯಾಗಿ ನೋಡಿ. ಇವರಿಬ್ಬರೂ ಮೈಸೂರು ರಾಜ ಲಾಂಛನ ಗಂಡಭೇರುಂಡದ ಹಾಗೆ ಎಂದು ಇಬ್ಬರನ್ನು ಹಾಡಿ ಹೊಗಳಿದರು.

ನಿಕಿಲ್ ಮುಗ್ಧ ಮನಸ್ಸಿನ ಬಗ್ಗೆ ಮಾತನಾಡುತ್ತ, ನಾಲ್ಕೇ ನಾಲ್ಕು ತಿಂಗಳ ಹಿಂದೆ ಅಂಬರೀಶ್ ನಿಧನರಾದರು. ಈ ವೇಳೆ ರಾತ್ರಿ ಎರಡು ಗಂಟೆಗೆ ನಿಖಿಲ್ ಜೊತೆ ಇದ್ದೆ. ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಕ್ರಿಯೆಗೆ ಜಾಗ ಗುರುತಿಸಿದ್ದೆ ನಿಖಿಲ್ ಎಂದು ಮುನಿರತ್ನ ಅವರು ಗುಣಗಾನ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *