ಬೆಂಗಳೂರು: ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಶಾಸಕ ಲಕ್ಷ್ಮಣ್ ಸವದಿ (Laxman Savadi) ಸಚಿವ ಸ್ಥಾನದ ಆಸೆ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಡಿಸೆಂಬರ್ನಲ್ಲಿ ಸಂಪುಟ ವಿಸ್ತರಣೆ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಡಿಸೆಂಬರ್ ಬಂದಾಗ ಅದನ್ನ ಚರ್ಚೆ ಮಾಡೋಣ. ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ. ನನ್ನಿಂದ ಕಾಂಗ್ರೆಸ್ಗೆ ಲಾಭ ಆಗಿದೆ. ಕಾಂಗ್ರೆಸ್ನಿಂದ (Congress) ನನಗೂ ಲಾಭ ಆಗಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಅವರಿಗೆ ಕೇಳಿ ಎಂದಿದ್ದಾರೆ. ಇದನ್ನೂ ಓದಿ: ಉತ್ತಮ ಆಡಳಿತ ನೀಡ್ಬೇಕಾದ್ರೆ ಜನಗಣತಿ ಆಗ್ಬೇಕು, ಬಿಜೆಪಿ ಸಮೀಕ್ಷೆಯೇ ಮಾಡಿಲ್ಲ: ಹೆಚ್.ಸಿ ಮಹದೇವಪ್ಪ
ರಾಜಕೀಯದಲ್ಲಿ ಎಲ್ಲರೂ ಅಪೇಕ್ಷಿತರೇ. ಎಲ್ಲರೂ ಏನಾದ್ರೂ ಆಗಬೇಕು, ಮಂತ್ರಿ, ಸಿಎಂ, ಆಗಬೇಕು ಅಂತ ಆಸೆ ಇದ್ದೇ ಇರುತ್ತದೆ. ನನಗೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಕಾಂಗ್ರೆಸ್ ಪಕ್ಷ ನನ್ನನ್ನ ಬಳಸಿಕೊಳ್ತಿದೆ. ಬಳಸಿಕೊಳ್ಳಬೇಕು ಎಂದು ಹೇಳ್ತೀನಿ ಅಂತ ಸಚಿವ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ.
ನವೆಂಬರ್ನಲ್ಲಿ ಸಿಎಂ ಇಳಿಯುತ್ತಾರೆ ಎಂಬ ಆರ್.ಅಶೋಕ್ (R.Ashok) ಭವಿಷ್ಯದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಶೋಕ್ ಅವರನ್ನ ಸ್ವಲ್ಪ ದಿವಸ ಬಬಲಾದಿ ಮಠಕ್ಕೆ ಬಿಡ್ತೀನಿ. ಅಲ್ಲಿ ಭವಿಷ್ಯ ಕಲಿತುಕೊಂಡು ಬಂದು ಹೇಳಲಿ. ಬಬಲಾದಿ ಮಠ ಫೇಮಸ್ ಮಠ. ಕಾಲಜ್ಞಾನದ ಬಗ್ಗೆ ಉಲ್ಲೇಖ ಇದೆ ಅಲ್ಲಿ. ಅವರಿಗೆ ಅಲ್ಲಿಂದ ಉಪದೇಶ ಮಾಡಿಸಿ, ತತ್ವಜ್ಞಾನ ಬಿತ್ತಿಸಿ ಮುಂದೆ ಕಾಲಜ್ಞಾನಿ ಮಾಡೋಣ ಅಂತ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಜಾತಿಗಣತಿ ಲೋಪ ಸರಿ ಮಾಡಲು ಹೊಸ ಜಾತಿಗಣತಿ: ಲಕ್ಷ್ಮಣ್ ಸವದಿ