ಕಲಬುರಗಿ: ಕರ್ನಾಟಕ ಐಎಎಸ್ ಕೇಡರ್ ಅಧಿಕಾರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಹೆಪ್ಸಿಬಾ ರಾಣಿ ಸಹೋದರಿ ಡಾ.ಸೂರ್ಯಕುಮಾರಿ ಅನುಮಾನಾಸ್ಪದವಾಗಿ ಆಂಧ್ರದ ವಿಜಯವಾಡಾದಲ್ಲಿ ಸಾವನಪ್ಪಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಸೂರ್ಯಕುಮಾರಿ ನಾಪತ್ತೆಯಾಗಿದ್ದು ಇಂದು ಅವರ ಶವ ವಿಜಯವಾಡದ ರೋಶಾ ಕ್ಯಾನಲ್ ನಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆದ ಮೂರು ದಿನಗಳ ಹಿಂದೆ ಕೋರ್ಲಪಾಟಿ ಅವರ ಪೋಷಕರು ಟಿಡಿಪಿ ಮಾಜಿ ಶಾಸಕ ಜಯರಾಜನ್ ಅವರ ಮಗ ವಿದ್ಯಾಸಾಗರ ಕಿಡ್ನಾಪ್ ಮಾಡಿದ್ದಾರೆ ಅಂತಾ ಆರೋಪಿಸಿದ್ದರು. ಆದರೆ ಸಾವಿಗೂ ಮುನ್ನ ಡಾ.ಸೂರ್ಯಕುಮಾರಿ ತಮ್ಮ ಮೊಬೈಲ್ ನಿಂದ ಶಾಸಕರ ಪುತ್ರ ವಿದ್ಯಾಸಾಗರ ಮೊಬೈಲ್ಗೆ “ನಿನ್ನ ಬಿಟ್ಟು ನನಗೆ ಇರಲು ಸಾಧ್ಯವಿಲ್ಲ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಅಂತಾ ಮೇಸೆಜ್ ಮಾಡಿದ್ದಾರೆ.
ಸದ್ಯ ಈ ಕುರಿತು ಮಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.