ಬಳ್ಳಾರಿ: ಗಣಿನಾಡು ಬಳ್ಳಾರಿಯ (Ballari) ಕರಿಮಾರಮ್ಮ ಗುಡ್ಡದ ಮೇಲಿರುವ ಮದರ್ ಟ್ಯಾಂಕ್ (Mother Tank) ಬಳಿ ಪುಂಡರ ಹಾವಳಿ ಮೀತಿ ಮೀರಿದ್ದು, ಕಡಿವಾಣ ಹಾಕಬೇಕು ಎಂದು ಪಾಲಿಕೆ ಸದಸ್ಯರಾದ ಮಿಂಚು ಶ್ರೀನಿವಾಸ್, ನೂರ್ ಮೊಹಮ್ಮದ್ ನೇತೃತ್ವದಲ್ಲಿ ಎಸ್ಪಿ ರಂಜಿತ್ಕುಮಾರ್ ಭಂಡಾರು ಅವರಿಗೆ ಮನವಿ ನೀಡಿದರು.
ಇಡೀ ಬಳ್ಳಾರಿ ನಗರಕ್ಕೆ ನೀರು ಸರಬರಾಜು (Water Supply) ಮಾಡುವ ಮದರ್ಟ್ಯಾಂಕ್ ಅತ್ಯಂತ ಸುರಕ್ಷಿತವಾಗಿಡಬೇಕಾದ ಸೂಕ್ಷ್ಮ ಪ್ರದೇಶಗಳಲ್ಲೊಂದು. ಆದರೆ ಅಲ್ಲಿ ಕೆಲ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಕ್ರಮದ ತನಿಖೆಯ ವರದಿ ಬರುವ ಮೊದಲೇ ಬಿಲ್ ಹಣ ಬಿಡುಗಡೆ ಮಾಡುವುದು ಸರಿಯಲ್ಲ: ಸಿದ್ದರಾಮಯ್ಯ
ಮದ್ಯ ಸೇವನೆ ಮಾಡಿ ದಾಂಧಲೆ ನಡೆಸುವುದರ ಜೊತೆಗೆ ಬಾಟಲಿಗಳು ಸೇರಿದಂತೆ ಇತರ ವಸ್ತುಗಳನ್ನು ಟ್ಯಾಂಕ್ನಲ್ಲಿ ಎಸೆದು ನಗರವಾಸಿಗಳ ಆರೋಗ್ಯಕ್ಕೆ ಸಂಚಕಾರ ತರುತ್ತಿದ್ದಾರೆ ಎಂಬ ದೂರುಗಳಿವೆ. ಸ್ಥಳೀಯ ಪಾಲಿಕೆ ಸದಸ್ಯರಿಗೂ ಅಲ್ಲಿನ ನಾಗರಿಕರಿಂದ ದೂರುಗಳು ಬಂದಿವೆ ಎಂದು ಪಾಲಿಕೆ ಸದಸ್ಯರಾದ ಮಿಂಚು ಶ್ರೀನಿವಾಸ್ ಹಾಗೂ ನೂರ್ ಮೊಹಮ್ಮದ್ ಹೇಳಿದರು.
Web Stories