ಬೆಂಗಳೂರು: ಸೈಡ್ ಕೊಡ್ಲಿಲ್ಲ ಅಂತಾ ಬಿಎಂಟಿಸಿ ಡ್ರೈವರ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಬಳಿಕ ಪೆಪ್ಪರ್ ಸ್ಟ್ರೇ ಮಾಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
36 ವರ್ಷದ ಪದ್ಮನಾಭ್ ಹಲ್ಲೆಗೊಳಗಾದ ಬಿಎಂಟಿಸಿ ಚಾಲಕ. ರೂಟ್ ನಂ 271 ಆರ್ ನಂಬರಿನ ಬಿಎಂಟಿಸಿ ಬಸ್ ಡ್ರೈವರ್ ಪದ್ಮನಾಭ್ ಮೇಲೆ ಬಿಇಎಲ್ ಸರ್ಕಲ್ ಬಳಿ ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ ನಂತ್ರ ಪೆಪ್ಪರ್ ಸ್ಟ್ರೇ ಮಾಡಿ ಪರಾರಿಯಾಗಿದ್ದಾರೆ.
ಸದ್ಯ ದುಷ್ಕರ್ಮಿಗಳ ವಿರುದ್ಧ ಚಾಲಕ ಪದ್ಮನಾಭ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.