ರಮೇಶ್ ಬದ್ಲು ಸತೀಶ್, ಇಬ್ರೂ ಒಂದೇ ಮನೆಯವ್ರು ಅಲ್ವಾ: ಜಮೀರ್ ಅಹ್ಮದ್

Public TV
1 Min Read
ramesh satish zameer

-ನಾನು ಯಾವಾಗಲೂ ಸೇಫ್

ಬೆಂಗಳೂರು: ದೆಹಲಿಯ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಆದರೆ ನಾವು ಇರೋವರೆಗೂ ಯಾವುದೇ ತೀರ್ಮಾನ ಹೊರ ಬಂದಿರಲಿಲ್ಲ. ಇದೀಗ ಕೆಲ ಮಾಹಿತಿ ಲಭ್ಯವಾಗಿದ್ದು, ಎಂಟಿಬಿ ನಾಗರಾಜ್, ತುಕಾರಾಂ, ತಿಮ್ಮಾಪುರ, ರಹೀಂ ಖಾನ್, ಶಿವಳ್ಳಿ, ಪರಮೇಶ್ವರ್ ನಾಯ್ಕ್ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇತ್ತ ಎಂ.ಬಿ.ಪಾಟೀಲ್ ಅವರ ಹೆಸರು ಸಹ ಫೈನಲ್ ಪಟ್ಟಿಯಲ್ಲಿದೆಯಂತೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ನಗರದ ದೇವನಹಳ್ಳಿ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೇಫ್ ಆಗಿದ್ದೇನೆ. ಮೊದಲ ಬಾರಿ ಸಚಿವ ಸಂಪುಟ ರಚನೆಯಲ್ಲಿ ನಾನು ಲಾಭಿ ಮಾಡುವುದಕ್ಕೆ ಮುಂದಾಗಿಲ್ಲ. ಪಕ್ಷದ ನಿಷ್ಠಾವಂತರಿಗೆ ಖಂಡಿತವಾಗಿ ಸ್ಥಾನ ಸಿಗುತ್ತೆ ಎಂಬ ನಂಬಿಕೆ ನನ್ನಲ್ಲಿದ್ದರಿಂದ ಅಂದು ದೆಹಲಿಗೂ ಹೋಗದೇ ಬೆಂಗಳೂರಿನಲ್ಲಿಯೇ ಇದ್ದೆ. ಪಕ್ಷ ನನಗೆ ಸಚಿವ ಸ್ಥಾನ ನೀಡಿದ್ದು, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

zameer 1

ರಮೇಶ್ ಜಾರಕಿಹೊಳಿ ಮತ್ತು ಆರ್.ಶಂಕರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗಿದೆ ಎಂಬ ವಿಷಯ ಮಾಧ್ಯಮಗಳಿಂದ ಗೊತ್ತಾಗಿದೆ. ಬೆಳಗಾವಿಯಲ್ಲಿ ರಮೇಶ್ ಬದಲು ಸತೀಶ್ ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಒಂದೇ ಕುಟುಂಬದವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷದ ಕೆಲವು ನಿಯಮಗಳಡಿ ಸಚಿವ ಸ್ಥಾನ ಸಿಗುತ್ತದೆ. ಹೈಕಮಾಂಡ್ ಬಳಿ ಎಲ್ಲರ ಮಾಹಿತಿ ಇರುತ್ತದೆ. ಅರ್ಹತೆ ನೋಡಿ ಸ್ಥಾನಮಾನ ಕೊಡ್ತಾರೆ. ಹೈಕಮಾಂಡ್ ನಿರ್ಣಯಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *