– ನವೀಕೃತ ಕಟ್ಟಡ ಉದ್ಘಾಟನೆ
ಬೆಂಗಳೂರು: ಯಶವಂತಪುರದಲ್ಲಿ ಮೂರು ಎಕರೆ ಪ್ರದೇಶದಲ್ಲಿ ನೂತನ ವಕ್ಫ್ ಭವನ (Waqf Board Bhavan) ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಕ್ಫ್ ಮಂಡಳಿಯ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಆದಷ್ಟು ಬೇಗ ಸರ್ಕಾರದ ನೆರವು ಪಡೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. ವಕ್ಫ್ ಮಂಡಳಿಯ ಮೂರು ಎಕರೆ ಜಾಗ ಯಶವಂತಪುರದಲ್ಲಿದೆ. ಜಾಗದ ವೆಚ್ಚ ಸೇರಿದಂತೆ ಒಂದು ಎಕರೆಯಲ್ಲಿ 75 ಕೋಟಿ ರೂ.ವೆಚ್ಚದಲ್ಲಿ ವಕ್ಫ್ ಭವನ ನಿರ್ಮಾಣವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ, ಅವರು ಮುನ್ನಡೆಯುತ್ತಾರೆ: ದ್ರೌಪದಿ ಮುರ್ಮ
ಸಮುದಾಯದಲ್ಲಿ ವಕ್ಫ್ ಭವನ ನಿರ್ಮಾಣದ ಕನಸು ಬಹಳ ಹಿಂದಿನಿಂದಲೂ ಇದೆ. ಅದನ್ನು ಸಾಕಾರ ಮಾಡಲು ನಾವು ತಯಾರಿದ್ದೇವೆ. ನಮ್ಮ ಸರ್ಕಾರ ನೆರವು ನೀಡುವ ವಿಶ್ವಾಸ ಇದೆ. ದೇಶದಲ್ಲೇ ಮಾದರಿ ವಖ್ಫ್ ಭವನ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.
ಪ್ರಸ್ತುತ ನವೀಕೃತ ಕಟ್ಟಡಕ್ಕೆ 2 ಕೋಟಿ ರೂ. ವೆಚ್ಚ ಮಾಡಿದ್ದು, ಇದರ ಅಗತ್ಯತೆ ಹೆಚ್ಚಾಗಿತ್ತು. ಈ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಬೇಕಾಗಿದ್ದು 19 ಲಕ್ಷ ರೂ. ಹೆಚ್ಚುವರಿಯಾಗಿ ಒದಗಿಸುವ ಭರವಸೆ ನೀಡಿದ್ದಾರೆ.
ಹಜ್ ಸಚಿವ ರಹೀಮ್ ಖಾನ್, ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಅವರು, ಜಮೀರ್ ಅಹಮದ್ ಅವರ ಸಮಯದಲ್ಲಿ ನೂತನ ವಕ್ಫ್ ಭವನ ನಿರ್ಮಾಣ ಆಗಲಿ. ಇದಕ್ಕೆ ನಮ್ಮೆಲ್ಲರ ಬೆಂಬಲ ಇರುತ್ತದೆ ಎಂದಿದ್ದಾರೆ.
ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಪಿ ಸಾದಿ ಮಾತನಾಡಿ, ಇದೊಂದು ಉತ್ತಮ ಕೆಲಸವಾಗಿದೆ. ಈ ಕೆಲಸ ನಮ್ಮ ಕಾಲದಲ್ಲಿ ಆಗಿದೆ ಎಂಬ ಸಂತೋಷ ಇದೆ. ಸಚಿವ ಜಮೀರ್ ಅಹಮದ್ ಅವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ವಕ್ಫ್ ಮಂಡಳಿ ಸದಸ್ಯರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಖಾನ್ ಫರ್ವೇಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಘಟಿಕೋತ್ಸವ ಸಮಾರಂಭ ಗುರು ಶಿಷ್ಯರ ಶ್ರೇಷ್ಠ ಸಂಪ್ರದಾಯದ ಪ್ರತಿಬಿಂಬ – ಥಾವರ್ ಚಂದ್ ಗೆಹ್ಲೋಟ್
Web Stories