ಚಾಮರಾಜನಗರ: ಎರಡು ತಿಂಗಳಿಂದ ನನ್ನನ್ನು ಮಾಧ್ಯಮದವರು ಉಜ್ಜುತ್ತಾ ಇದ್ದೀರಿ, ಎಷ್ಟು ಉಜ್ಜಬೇಕೋ ಉಜ್ಜಿಕೊಳ್ಳಿ ಎಂದು ಸಚಿವ ವಿ.ಸೋಮಣ್ಣ (V. Somanna) ವಾಗ್ದಾಳಿ ನಡೆಸಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆ ವಿಚಾರ ಮುಗಿದ ಅಧ್ಯಾಯ. ಕಾಂಗ್ರೆಸ್ (Congress) ಸೇರ್ಪಡೆ ನನ್ನ ತಲೆಯಲ್ಲೇ ಇಲ್ಲ. ನಾನೊಬ್ಬ ಡೈರೆಕ್ಟ್ ರಾಜಕಾರಣಿ. ಏನಿದ್ರು ನೇರವಾಗಿ ಹೇಳ್ತೀನಿ ಎಂದರು. ಇದನ್ನೂ ಓದಿ: ನನಗೆ ಉರಿಗೌಡ- ನಂಜೇಗೌಡ ಗೊತ್ತಿಲ್ಲ, ದೇವೇಗೌಡ್ರು ಮಾತ್ರ ಗೊತ್ತು: ಸುಧಾಕರ್
ಕ್ಷುಲ್ಲಕ ವಿಚಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಚಾಮರಾಜನಗರ (Chamarajanagar) ಜಿಲ್ಲೆಯ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿಲ್ಲ. ಚಾಮರಾಜನಗರ ಜಿಲ್ಲೆ ನನ್ನ ಪ್ರೀತಿಯ ಜಿಲ್ಲೆ. ಇಲ್ಲಿ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿಲ್ಲ. ಪಕ್ಷದ ತೀರ್ಮಾನವೇ ಅಂತಿಮ ಎಂದು ಹೇಳಿದರು.