ನೆಲಮಂಗಲ: ಚುನಾವಣೆ ಹೊಸ್ತಿಲಲ್ಲಿ ಇರುವಾಗ ಆರೋಪ ಮಾಡುವುದೆಲ್ಲ ಸರ್ವೆ ಸಾಮಾನ್ಯ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Sudhakar) ತಿಳಿಸಿದರು.
ಸರ್ಕಾರದಲ್ಲಿ ಕಾಮಗಾರಿಗಳಿಗೆ ಕಮಿಷನ್ ವಿಚಾರ ಮತ್ತೆ ಸದ್ದು ಮಾಡಿದೆ. ಸೋಮವಾರ ಗುತ್ತಿಗೆದಾರರು ಶಾಸಕ ತಿಪ್ಪಾರೆಡ್ಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಚಾರದಲ್ಲಿ ನೆಲಮಂಗಲದಲ್ಲಿ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಚುನಾವಣೆ ಹೊಸ್ತಿಲಲ್ಲಿ ಇರುವಾಗ ಆರೋಪ ಸರ್ವೆ ಸಾಮಾನ್ಯ. ಈ ಮೂರುವರೆ ವರ್ಷದಲ್ಲಿ ಏನೂ ಇರಲಿಲ್ಲ. ವಿರೋಧ ಪಕ್ಷಗಳಿಗೆ ಉತ್ತರ ಕೊಡುವ ಜವಾಬ್ದಾರಿ ನಮ್ಮ ಸರ್ಕಾರ ಮಾಡುತ್ತದೆ. ಗುತ್ತಿಗೆದಾರ ಆರೋಪ ಬಗ್ಗೆ ಆಡಿಯೋ, ವೀಡಿಯೋ ಬಗ್ಗೆ ನಿಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ವನ್ನು ಟೀಕಿಸಿದರು.
ಕಾಂಗ್ರೆಸ್ಗೆ ಒಂದರೆಡು ಸೀಟ್ ಬರಬಹುದು: ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ನ (Congress) ನಾಯಕಿ ಸಮಾವೇಶದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆ ಸಾಮಾನ್ಯವಾಗಿ 9 ರಿಂದ 10 ಸೀಟ್ ಬರುತ್ತಿತ್ತು. ಆದರೆ ಮೇಡಂ ಪ್ರಿಯಾಂಕಾ ಗಾಂಧಿಯಿಂದ ಈಗ ಒಂದೆರಡು ಸೀಟ್ ಬರಬಹುದು ಅಷ್ಟೆ ವ್ಯಂಗ್ಯವಾಡಿದರು. ಇದನ್ನೂ ಓದಿ: ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಗೆ ಚಾಕು ಇರಿದ ಆಟೋ ಚಾಲಕ
ಕಾಂಗ್ರೆಸ್ ಅವರ ಪ್ರಣಾಳಿಕೆ ಕೇವಲ ಪ್ರಣಾಳಿಕೆಯಾಗಿಯೇ ಉಳಿಯುತ್ತೆ, ಆದರೆ ನಾವು ಚುನಾವಣೆಗೂ ಹೋಗುವ ಮುನ್ನ ನಮ್ಮ ಸರ್ಕಾರ ಎಲ್ಲವನ್ನು ಮಾಡಿರುತ್ತೆ, ನಮ್ಮ ಸರ್ಕಾರದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಸಿಎಂ ಅವರು ಹೆಚ್ಚು ಒತ್ತು ನೀಡಿದ್ದು, ಅವರೆಲ್ಲಾ ಪ್ರಣಾಳಿಕೆಯನ್ನು ನಮ್ಮ ಸಿಎಂ ಕಾರ್ಯರೂಪಕ್ಕೆ ತಂದಿದ್ದಾರೆ ಎಂದರು. ಇದನ್ನೂ ಓದಿ: ಮಹಿಳಾ ಪ್ರಣಾಳಿಕೆ ಘೋಷಿಸಲಿದ್ದಾರೆ ಪ್ರಿಯಾಂಕಾ ಗಾಂಧಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k