ದಾವಣಗೆರೆ: ಒಂದೊಂದೆ ಮೆಟ್ಟಿಲು ಹತ್ತೋದು ಒಳ್ಳೆಯದು ಎಂದು ಹೇಳುವ ಮೂಲಕ ಚನ್ನಗಿರಿ ಕಾಂಗ್ರೆಸ್ ನೂತನ ಶಾಸಕ ಶಿವಗಂಗಾ ಬಸವರಾಜ್ ಗೆ (Shivaganga Basavaraj) ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (S S Mallikarjun) ಕ್ಲಾಸ್ ತೆಗೆದುಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಹಿರೇಗಂಗೂರ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಒಂದೇ ಜಿಲ್ಲೆಯ ಶಾಸಕ, ಸಚಿವರಾಗಿದ್ರೂ ಇದೇ ಮೊದಲ ಬಾರಿ ಮುಖಾಮುಖಿಯಾದರು. ಈ ತುಂಬಿದ ಸಭೆಯಲ್ಲೇ ಸಚಿವರು ತೀಕ್ಷ್ಣವಾಗಿ ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಹೆಚ್ಡಿ ಕುಮಾರಸ್ವಾಮಿ ತಡರಾತ್ರಿ ಆಸ್ಪತ್ರೆಗೆ ದಾಖಲು
ಬಸವರಾಜ್ ಬಹಳ ಬೇಗ ಶಾಸಕ ಆಗಿದ್ದಾನೆ. ಯುವಕ, ಬಹಳ ಆಕ್ಟೀವ್ ಇದ್ದಾನೆ. ದಿಢೀರ್ ಮೆಟ್ಟಿಲು ಹತ್ತೋಕೆ ಹೋಗುತ್ತಿದ್ದಾನೆ. ಒಂದೊಂದೇ ಮೆಟ್ಟಿಲು ಹತ್ತೋದು ಒಳ್ಳೆಯದು. ಸಚಿವರು ಕಾಲ್ ರಿಸೀವ್ ಮಾಡಲ್ಲ, ಕೈಗೆ ಸಿಗಲ್ಲ ಅಂತಾನೆ. ಯಾವ ಸಚಿವರು ಅಂತ ಕೇಳಿದ್ರೆ, ನೀವು ಅಲ್ಲ ಅಂತಾನೆ. ಏನ್ ನನಗೆ ಹೇಳಿದ್ನೋ, ಡಿಕೆಶಿಗೋ, ಸಿಎಂಗೋ?. ಜನರ ಜೊತೆ ಒಳ್ಳೆಯ ಕೆಲಸ ಮಾಡು, ಒಳ್ಳೆಯ ಶಾಸಕ ಆಗು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್
ಸಚಿವರು ಕಾಲ್ ರಿಸೀವ್ ಮಾಡಿಲ್ಲ, ಕೈಗೆ ಸಿಗಲ್ಲ ಎಂದು ಶಾಸಕ ಬಸವರಾಜ್ ಹೇಳಿಕೆ ನೀಡಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]