ಚಿಕ್ಕಬಳ್ಳಾಪುರ: ಹಿಜಬ್ ಮೂಲಭೂತ ಹಕ್ಕು ಎಂಬ ಮಾಜಿ ಸಿಎಂ ಹೇಳಿಕೆ ಖಂಡಸಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಸಿದ್ದರಾಮಯ್ಯನವರು ಮೂಲಭೂತ ಹಕ್ಕುಗಳನ್ನ ಓದಿಕೊಳ್ಳಲಿ ಅಂತ ಟೀಕಿಸಿದ್ದಾರೆ.
ಸಂವಿಧಾನದ ಪೀಠಿಕೆಯಲ್ಲಿ ಮೂಲಭೂತ ಹಕ್ಕುಗಳಿವೆ, ಮೊದಲು ಅವನ್ನ ಓದಿಕೊಳ್ಳಲಿ. ಸಿದ್ದರಾಮಯ್ಯನವರು ಹಿರಿಯರು, ಮಾಜಿ ಸಿಎಂಗಳಾಗಿದ್ದವರು. ಸಂವಿಧಾನ ಬಲ್ಲವರು ಈ ರೀತಿ ಮಾತಾಡೋದು ಸರಿ ಅಲ್ಲ ಎಂದರು. ಇದನ್ನೂ ಓದಿ: ಹಿಜಬ್ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ
ಈ ಹಿಜಬ್ ವಿಚಾರದಲ್ಲಿ ರಾಷ್ಟ್ರೀಯ ನಾಯಕರ ಹೇಳಿಕೆಗಳು ದೇಶದಲ್ಲಿ ಆಭದ್ರತೆ, ಆಶಾಂತಿಗೆ ಕಾರಣವಾಗಲಿವೆ. ಇದು ರಾಜಕೀಯದ ವಿಷಯ ಅಲ್ಲ. ದೇಶದ ಐಕ್ಯತೆಯ ವಿಷಯ. ದೇಶದಲ್ಲಿ ಶಾಂತಿ ಭಂಗ ತರುವ ವಿಚಾರಗಳು ಆಗಬಾರದು. ಸಹಬಾಳ್ವೆಯಿಂದ ನಡೆದುಕೊಂಡು ಹೋಗಬೇಕು. ಮೋದಿಯವರ ಆಶಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಯಾವುದೇ ಧರ್ಮದ ಜನರಿಗೆ ನಮ್ಮಿಂದ ಅಸಹಕಾರ ಇಲ್ಲ. ಎಲ್ಲರನ್ನೂ ಸಮನಾಗಿ ನೋಡುವುದೇ ನಮ್ಮ ಆಶಯ ಎಂದರು.