Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bellary

ರಾಮುಲು ಅಣ್ಣ ಎಲೆಕ್ಷನ್ ಶಾಂತಿಯುತವಾಗಿ ನಡೆಸಿಕೊಟ್ಟಿದ್ದಾರೆ- 3 ಜನರಿಗೆ ಡಿಕೆಶಿಯಿಂದ ಥ್ಯಾಂಕ್ಸ್

Public TV
Last updated: November 6, 2018 12:12 pm
Public TV
Share
3 Min Read
DEEKESHI copy
SHARE

ಬೆಂಗಳೂರು: ಬಳ್ಳಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನನಗೆ ಜವಾಬ್ದಾರಿ ವಹಿಸಿತ್ತು. ಈ ಸಂದರ್ಭದಲ್ಲಿ ಕೆಲವರು ಅಭಿನಂದಿಸಿದ್ರು, ಇನ್ನು ಕೆಲವರು ಟೀಕೆ ಟಿಪ್ಪಣಿಗಳನ್ನು ಮಾಡಿದ್ರು. ಇವುಗಳನ್ನೆಲ್ಲಾ ನಾನು ಬಹಳ ಸಂತೋಷದಿಂದಲೇ ಸ್ವೀಕರಿಸಿದ್ದೆ. ನಾನು ಈ ಚುನಾವಣೆಯಲ್ಲಿ 3 ಜನಕ್ಕೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಅಂತ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಬಳ್ಳಾರಿ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲನೆಯದಾಗಿ ಶ್ರೀರಾಮುಲು ಅಣ್ಣ ಅವರಿಗೆ ಧನ್ಯವಾದ ಹೇಳುತ್ತೇನೆ. ಶ್ರೀರಾಮುಲು ಅಣ್ಣನವರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹಳ ಶಾಂತ ರೀತಿಯಿಂದ ಚುನಾವಣೆಯನ್ನು ನಡೆಯಲು ಅವಕಾಶ ಮಾಡಿಕೊಟ್ಟರು. ಹಾಗೆಯೇ ಯಾವ ಸಣ್ಣ ಕಾರ್ಯಕರ್ತರಲ್ಲಿ ಘರ್ಷಣೆಯನ್ನು ಉಂಟು ಮಾಡದೇ ಇದ್ದು, ಒಟ್ಟಿನಲ್ಲಿ ಈ ಚುನಾವಣೆ ಸುಲಲಿತವಾಗಿ ನಡೆಸಿಕೊಡಲು ಸಹಕಾರ ಮಾಡಿಕೊಟ್ಟಿದ್ದಾರೆ. ಚುನಾವಣೆಯಲ್ಲಿ ಅವರು ಗೆದ್ದಿರಬೋದು ಅಥವಾ ಸೋತಿರಬಹುದು. ಸೋಲು-ಗೆಲುವು ಇಲ್ಲಿ ಮುಖ್ಯವಲ್ಲ. ಬದಲಾಗಿ ನಮ್ಮಿಂದ ಯಾವುದೇ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ನೋವಾಗಬಾರದು ಅಂತ ಅವರು ನಮಗೆ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಟಾಂಗ್ ನೀಡಿದ್ರು.

DKSHI SRIRAMULU

ಬಿಜೆಪಿ ಅಭ್ಯರ್ಥಿ ಶಾಂತ ಅವರು ಶಾಂತ ಸ್ವಾಭವದವರು. ನಮ್ಮ ಮತಯಾಚನೆಯ ವೇಳೆ ಎಲ್ಲಿಯೂ ಅಡ್ಡಿಪಡಿಸಲಿಲ್ಲ. ಉಗ್ರಪ್ಪನವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದಾಗ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ. ಜೊತೆಯಲ್ಲಿ ಈ ಬಾರಿ ನಮ್ಮನ್ನು ಕೈ ಹಿಡಿದ ಜನತೆಗೆ ಹಾಗೂ ಬಳ್ಳಾರಿಯ ಬಿಜೆಪಿ ಕಾರ್ಯಕರ್ತರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

ಪಕ್ಷ-ಭೇದ, ಜಾತಿ-ಧರ್ಮ ಇವನ್ನೆಲ್ಲಾ ಬಿಟ್ಟು ಒಗ್ಗಟ್ಟಿನಿಂದ ಮತದಾರರು ಬಳ್ಳಾರಿಗೆ ಇಂದು ಧ್ವನಿಯಾಗಿರಬೇಕು, ಉಗ್ರಪ್ಪನವರು ನಮ್ಮ ವಿಚಾರವನ್ನು ಕರ್ನಾಟಕ ಸರ್ಕಾರದಲ್ಲಿ ಹೋರಾಟ ಹಾಗೂ ಪಾರ್ಲಿಮೆಂಟಿನಲ್ಲಿ ಧ್ವನಿಯೆತ್ತುವ ಭರವಸೆ ನೀಡಿದ್ದರು. ಹೀಗಾಗಿ ಮತದಾರರು ಅವರಿಗೆ ಮತ ಹಾಕಿ ಆ ಅವಕಾಶವನ್ನು ಉಗ್ರಪ್ಪ ಅವರಿಗೆ ನೀಡಿದ್ದಾರೆ ಎಂದರು.

Sriramulu Glass e1541486458852

ಯೋಗಕ್ಕಿಂತ ಯೋಗಕ್ಷೇಮ ಮುಖ್ಯ:
ಆದ್ರೆ ಇಲ್ಲಿ ನಾನು ಗೆದ್ದುಬಿಟ್ಟಿದ್ದೀನಿ ಅಂತ ಹಿಗ್ಗಲು ತಯಾರಿಲ್ಲ. ಯಾಕಂದ್ರೆ ಯೋಗಕ್ಕಿಂತ ಯೋಗಕ್ಷೇಮ ಬಹಳ ಮುಖ್ಯವಾಗುತ್ತದೆ. ಐದೂವರೆ ತಿಂಗಳ ಚುನಾವಣೆಗೆ ನಾನು ವೋಟ್ ಕೇಳಿಲ್ಲ. ಡಿಕೆಶಿ ಅವರು ಇಂದು ಬಾಂಬ್ ಸಿಡಿಸುತ್ತಾರೆ ಅಂತ ಮಾಧ್ಯಮ ಮಿತ್ರರು ಹೇಳಿದ್ದರು. ನನ್ನ ಬಾಂಬ್ ಇಂದು ಬಳ್ಳಾರಿಯ ಅಭಿವೃದ್ಧಿಗೆ ಸಿಡಿಸ್ತೀನಿ. ನನ್ನ ಕಾರ್ಯಕ್ರಮ, ಯೋಜನೆ ಹಾಗೂ ಆಚಾರ-ವಿಚಾರ ಮತ್ತು ಮಾಡಿದಂತಹ ಪ್ರಚಾರ ಎಲ್ಲವೂ ಬಳ್ಳಾರಿಯ ಜನತೆಗೆ ಸರಿಯಾದ ರೀತಿಯ ನ್ಯಾಯವನ್ನು ಒದಗಿಸಿಕೊಡಬೇಕಾಗಿದೆ. ಅಲ್ಲಿರುವಂತಹ ಧೂಳನ್ನು ತೆಗೆಯುವಂತದ್ದು, ಉದ್ಯೋಗ ಸೃಷ್ಟಿ, ವಲಸೆ ಹೋಗುತ್ತಿರುವ ಯುವಕರಿಗೆ ಉದ್ಯೋಗ, ಕುಡಿಯುವ ನೀರು, ರಸ್ತೆ ಒದಗಿಸುವಂತಹ ಬಹಳ ದೊಡ್ಡ ಸವಾಲಿದೆ. ಈ ಸವಾಲನ್ನು ಚುನಾವಣೆಯ ಗೆಲುವು ಹೆಚ್ಚಿನ ಜವಾಬ್ದಾರಿಯನ್ನು ಹೊರಿಸಿದೆ ಅಂದ್ರು.

ಜನಾರ್ದನ ಅಣ್ಣನವರು ಕೂಡ ಸಾಕಷ್ಟು ಸವಾಲುಗಳನ್ನು ಎಸೆದಿದ್ದಾರೆ. ಮಾಧ್ಯಮ ಹಾಗೂ ವಿರೋಧ ಪಕ್ಷದವರ ಸವಾಲುಗಳನ್ನೆಲ್ಲಾ ಬಹಳ ಸಂತೋಷದಿಂದಲೇ ಸ್ವೀಕಾರ ಮಾಡಿದ್ದೇವೆ ಅಂತ ಹೇಳಿದ್ರು.

Janardhan Reddy

ಸಾವು, ಸೋಲಿಗೆ ಹೆದರುವವನಲ್ಲ:
ಇದೇ ವೇಳೆ ಪಬ್ಲಿಕ್ ಟಿವಿಯಲ್ಲಿ ಶ್ರೀರಾಮುಲು ಹಾಗೂ ಡಿಕೆಶಿಯ ಪಂಥಾಹ್ವಾನ ಪ್ರಸ್ತಾಪಿಸಿದ ಡಿಕೆಶಿ, ನಾನು ಚರ್ಚೆಗೆ ಬರಲು ಸಿದ್ಧನಿದ್ದೆ, ಆದ್ರೆ ರಾಮುಲು ಅಣ್ಣ ಬರಲಿಲ್ಲ. ನಾನು ಪಲಾಯನ ಮಾಡಿಲ್ಲ. ಚುನಾವಣೆಯಲ್ಲಿ ನಿಂತವರೆಲ್ಲ ಗೆಲ್ಲಲು ಸಾಧ್ಯವಿಲ್ಲ. ಹುಟ್ಟಿದವರೆಲ್ಲ ನಿರಂತರವಾಗಿ ಬದುಕಲು ಸಾಧ್ಯವಿಲ್ಲ. ಯಾವತ್ತಾದರೂ ಒಂದು ದಿನ ಸಾಯಲೇಬೇಕು. ಹೀಗಾಗಿ ಈ ಸಾವು ಹಾಗೂ ಸೋಲಿಗೆ ಹೆದರಿಕೊಂಡು ಮನೆಯಲ್ಲಿ ಕುಳಿತುಕೊಳ್ಳುವವನು ಈ ಡಿಕೆಶಿವಕುಮಾರ್ ಅಲ್ಲ ಅಂತ ತಿಳಿಸಿದ್ರು.

ಬಳ್ಳಾರಿಗೆ ಹೋಗುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ:
ಇವತ್ತು ದೀಪಾವಳಿ. ಈ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಮಹಾಜನತೆಗೆ ನನ್ನ ವೈಯಕ್ತಿಕವಾಗಿ, ಸರ್ಕಾರದ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಬಳ್ಳಾರಿಗೆ ಹೋಗುವ ಬಗ್ಗೆ ಇಂದು ನಾನು ನಿರ್ಧಾರ ಮಾಡಿಲ್ಲ. 5 ಕ್ಷೇತ್ರದಲ್ಲೂ ಚುನಾವಣಾ ಫಲಿತಾಂಶ ಹೊರಬಿದ್ದಿಲ್ಲ. ಇನ್ನೂ ಮತ ಎಣಿಕೆ ನಡೀತಾ ಇದೆ. ಹೀಗಾಗಿ ಕೊನೆಯ ಸುತ್ತಿನಲ್ಲಿ ರಾಜಕಾರಣದಲ್ಲಿ ಏನ್ ಬೇಕಾದ್ರೂ ಆಗಬಹುದು. ಇದರ ಅನುಭವ ನಮಗಿದೆ. ಲೀಡ್ ನಲ್ಲಿದ್ದವರು ಒಂದೇ ಬಾರಿಗೆ ಕೆಳಗಿಳಿದ ಅನೇಕ ಉದಾಹರಣೆಗಳು ಇವೆ ಅಂತ ಡಿಕೆಶಿ ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:bellarybengalurucongressDK Shivakumarelection resultKarnataka By Elections 2018ministerugrappaಉಗ್ರಪ್ಪಕರ್ನಾಟಕ ಚುನಾವಣೆ 2018ಡಿಕೆ ಶಿವಕುಮಾರ್ಪಬ್ಲಿಕ್ ಟಿವಿಬಳ್ಳಾರಿಬೆಂಗಳೂರು
Share This Article
Facebook Whatsapp Whatsapp Telegram

Cinema Updates

Kamal Haasan 2
ಕಮಲ್ ಹಾಸನ್ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
59 minutes ago
Shivarajkumar Kamal Haasan
ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ
9 hours ago
darshan 1
ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
12 hours ago
RASHMIKA
ಸೀರೆಯಲ್ಲಿ ಮಿಂಚು ಬಳ್ಳಿಯಂತೆ ಕಂಗೊಳಿಸಿದ ರಶ್ಮಿಕಾ – ವಿಜಯ್‌ ಕ್ಲಿಕ್‌ ಮಾಡಿದ್ದು ಅಂದ್ರು ಫ್ಯಾನ್ಸ್‌!
12 hours ago

You Might Also Like

Bhima River 1
Districts

ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ – ನದಿಗಿಳಿಯದಂತೆ ಜಿಲ್ಲಾಡಳಿತ ಸೂಚನೆ

Public TV
By Public TV
3 minutes ago
Hemavati River
Districts

ಹಾಸನದಲ್ಲಿ ತಗ್ಗಿದ ಮಳೆ ಅಬ್ಬರ – ಹೇಮಾವತಿ ಒಳಹರಿವಿನಲ್ಲಿ ಇಳಿಕೆ

Public TV
By Public TV
14 minutes ago
Snehamayi Krishna 2
Districts

MUDA Scam| ತನಿಖಾಧಿಕಾರಿ ಬದಲಾವಣೆಗೆ ನ್ಯಾಯಾಲಯಕ್ಕೆ ಅರ್ಜಿ

Public TV
By Public TV
25 minutes ago
elon musk and donald trump
Latest

ಟ್ರಂಪ್‌ ನೀತಿಯನ್ನು ಟೀಕಿಸಿದ ಬೆನ್ನಲ್ಲೇ DOGE ಮುಖ್ಯಸ್ಥ ಪಟ್ಟದಿಂದ ಇಳಿದ ಮಸ್ಕ್‌

Public TV
By Public TV
45 minutes ago
Chikkamagaluru murder
Chikkamagaluru

ಪತ್ನಿಯನ್ನು ಕೊಂದು ನಾಪತ್ತೆಯಾಗಿದ್ದ ಪತಿ, ಮುಳ್ಳಯ್ಯನಗಿರಿ ಕಾಡಿನಲ್ಲಿ ಬಂಧನ

Public TV
By Public TV
52 minutes ago
daily horoscope dina bhavishya
Astrology

ದಿನ ಭವಿಷ್ಯ 29-05-2025

Public TV
By Public TV
16 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?