ಬಳ್ಳಾರಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರ್ಷದ್ ಮನೆ ಮೇಲೆ ಬಿಜೆಪಿಯವರೇ ದಾಳಿ ಮಾಡಿದ್ದಾರೆ. ಈ ಬಗ್ಗೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದೇನೆ ಅಂತ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹರ್ಷದ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಬಿಜೆಪಿಯವರು ದಾಳಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಿದ್ದೆನೆ. ಈ ಬಾರಿ ಶಾಂತಿಯುತ ಚುನಾವಣೆ ಮಾಡುತ್ತಿದ್ದೇವೆ. ನಾವು ಶಾಂತಿ ಪ್ರಿಯರು. ಕಾರ್ಯಕರ್ತರಿಗೆ ಶಾಂತಿಯಿಂದ ಇರಲು ಸೂಚಿಸಿದ್ದೇವೆ ಅಂದ್ರು. ಇದನ್ನೂ ಓದಿ: Exclusive: ಬೈ ಎಲೆಕ್ಷನ್ ವೇಳೆಯಲ್ಲೇ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಅಟ್ಯಾಕ್
ಬಿಜೆಪಿಯವರಿಗೆ ಸೋಲ್ತೀವಿ ಅನ್ನೋ ಭಯ ಇದೆ. ಆ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಈಗಾಗಲೇ ಹರ್ಷದ್ ಅವರ ಮನೆ ಮೇಲೆ ಬಿಜೆಪಿಯವರು ದಾಳಿ ಮಾಡಿದ್ದಾರೆ. ಬ್ಯುಸಿನೆಸ್ ಏನೇ ಇದ್ರೂ ಚುನಾವಣೆ ಸಮಯದಲ್ಲಿ ಇದು ಸರಿಯಲ್ಲ. ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಬಿಜೆಪಿಯವರು ಹತಾಶರಾಗಿ ಈ ದಾಳಿ ಮಾಡಿದ್ದಾರೆ ಅಂತ ಕಿಡಿಕಾರಿದ್ರು.
ಬಳ್ಳಾರಿಯಲ್ಲಿ ಈ ಹಿಂದೆ ಶಾಂತವಾಗಿ ಚುನಾವಣೆ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯೋಕೆ ಅವಕಾಶ ಕೊಟ್ಟಿಲ್ಲ. ಈ ಸರಕಾರ, ಹಿಂದಿನ ಸರಕಾರ ಬೀಗಿ ಬಂದೋಬಸ್ತ್ ಮಾಡಿದೆ. ಮೈನಾರಿಟಿ ಸೀಟ್ ಹೆಚ್ಚು ಬಂದಿದೆ ಅಂತ ಅವರು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv