ಮಂಡ್ಯ: ರಾಜ್ಯ ಮೈತ್ರಿ ಸರ್ಕಾರ ಪತನ ಆಗುತ್ತೆ ಎಂದು ಕೌಂಟ್ ಡೌನ್ ಹೇಳುತ್ತಿರುವ ಬಿಜೆಪಿ ಮುಖಂಡರು, ಮುದಿ ನಾಯಿಯಂತೆ ಕಾಯುತ್ತಿದ್ದಾರೆ ಎಂದು ಹೇಳುವ ಮೂಲಕ ಸಚಿವ ಡಿ.ಸಿ ತಮ್ಮಣ್ಣ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೇ ಪಕ್ಷದ ಸರ್ಕಾರ ಇದ್ದರು ಕೂಡ ಅಸಮಾಧಾನ ಇರುವುದು ಸಾಮಾನ್ಯ. ಅಂತೆಯೇ ಇಂದು ಕೂಡ ಸಮ್ಮಿಶ್ರ ಸರ್ಕಾರದಲ್ಲಿ ಕೆಲ ಅಸಮಾಧಾನಗಳು ಇದೆ ಅಷ್ಟೇ. ಆದರೆ ಸರ್ಕಾರ ಸುಭದ್ರವಾಗಿದ್ದು, ಯಾವುದೇ ತೊಂದರೆ ಇಲ್ಲ. ಈ ಹಿಂದೆ ವಿಧಾನಸೌಧದಲ್ಲಿ ಜೆಎಚ್ ಪಾಟೇಲರು ಒಂದು ಮಾತು ಹೇಳಿದ್ದರು. ಇಂತಹದ್ದೇ ಸನ್ನಿವೇಶ ಇಂದು ನಿರ್ಮಾಣವಾಗಿದ್ದು, ಆನೆ ಮುಂದೆ ಹೋಗುವಾಗ ಹಿಂದೆ ಮುದಿನಾಯಿ ಆನೆ ಬೀಳುತ್ತೆ ಎಂದು ಹೋಗುತ್ತಿತ್ತು. ಆದರೆ ಆನೆ ಬೀಳಲಿಲ್ಲ, ನಾಯಿಗೆ ಸಿಗಲಿಲ್ಲ. ಸರ್ಕಾರದ ಬಗ್ಗೆ ಹೇಳಿಕೆ ನೀಡುವುದು ಕೆಲವರಿಗೆ ಚಟ ಆಗಿದೆ. ಇದರಂತೆ ಬಿಜೆಪಿಯವರು ಕಾದುಕುಳಿತ್ತಿದ್ದಾರೆ ಎಂದರು.
ಇದೇ ವೇಳೆ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಚಲುವರಾಯ ಸ್ವಾಮಿ ವಿರುದ್ಧ ಕಿಡಿಕಾರಿದ ಸಚಿವ ತಮ್ಮಣ್ಣ ಅವರು, ಅಧಿಕಾರದಲ್ಲಿ ಇಲ್ಲದೇ ಇರುವ ವೇಳೆ ಟೀಕೆ ಮಾಡುವುದು ಮಾನವ ಸಹಜ ಗುಣ. ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನವಿದ್ದರೆ ಸಿದ್ದರಾಮಯ್ಯ, ಪರಮೇಶ್ವರ್, ಕುಮಾರಸ್ವಾಮಿ ಅವರಂತಹ ನಾಯಕರು ಹೇಳಿಕೆ ನೀಡಿದರೆ ಮಾತ್ರ ಒಂದು ಮೌಲ್ಯ, ಅರ್ಥ ಇರುತ್ತೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv