ಕುಮಾರಸ್ವಾಮಿ ಸಿಗ್ನಲ್ ಇಲ್ಲದೇ ಯೂಟರ್ನ್ ಹೊಡೆಯುತ್ತಾರೆ: ಸಿಟಿ ರವಿ

Public TV
1 Min Read
bly ct ravi

ಬಳ್ಳಾರಿ: ಮಂಗಳೂರು ಗಲಬೆಗೆ ಪೊಲೀಸ್ ಇಲಾಖೆಯೇ ಕಾರಣ ಎಂದು ಮಂಗಳೂರು ಎಸ್‍ಪಿ ಹರ್ಷ ಅವರನ್ನು ಅಮಾನತ್ತು ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸಚಿವ ಸಿಟಿ ರವಿ ಅವರು ತಿರುಗೇಟು ನೀಡಿದ್ದಾರೆ.

ಹಂಪಿ ಉತ್ಸವದ ಮಳಿಗೆಗಳ ಉದ್ಘಾಟನೆ ಮಾಡಿ ಮಾತನಾಡಿದ ಸಿ.ಟಿ ರವಿ, ಪೊಲೀಸರು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂದು ಇರಲ್ಲಾ ಅವರೆಲ್ಲಾ ಈ ರಾಜ್ಯದ ಪೊಲೀಸರು. ಕುಮಾರಸ್ವಾಮಿ ಅವರು ಎರಡು ಸಾರಿ ಮುಖ್ಯಮಂತ್ರಿ ಆದವರು ಹೀಗಾಗಿ ಮಾತನಾಡುವ ಮುನ್ನ ಒಂದು ಸಾರಿ ವಿಚಾರ ಮಾಡಬೇಕು ಎಂದರು.

mng hdk 1

ಅಲ್ಲದೆ ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡಿ ಅವರ ನೈತಿಕ ಸ್ಥೈರ್ಯ ಕಡಿಮೆ ಮಾಡಿದ್ದಾರೆ. ಮಂಗಳೂರಿನಲ್ಲಿ ಕಲ್ಲು ಹೊಡೆದವರು ಪೊಲೀಸರಾ? ಬೆಂಕಿ ಹಚ್ಚಿದ್ದು ಪೊಲೀಸರಾ? ಎಂದು ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಾಂಗ್ಲಾ ವಲಸಿಗರನ್ನು ಹೊರ ಹಾಕಬೇಕು ಎನ್ನುತ್ತಿದ್ದರು. ಆದರೆ ಆದ್ರೆ ಈಗ ಯಾಕೆ ಈ ವಿರೋಧ. ಕುಮಾರಸ್ವಾಮಿ ಅವರ ಈ ನಡೆಯನ್ನು ನೋಡಿದರೆ ಸಿಗ್ನಲ್ ಇಲ್ಲದೇ ಯೂಟರ್ನ್ ಹೊಡೆಯುತ್ತಾರೆ ಎಂದು ಎನಿಸುತ್ತದೆ. ಜೆಡಿಎಸ್ ಒಂದು ಸೆಕ್ಯೂಲರ್ ಪಾರ್ಟಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಹೇಳಿಕೆಯಿಂದ ಇದು ಅಪ್ಪ-ಮಕ್ಕಳ ಪಕ್ಷ ಎನಿಸತ್ತೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *