– ಹಗ್ಗಜಗ್ಗಾಟ ಕ್ರೀಡೆಯಲ್ಲಿ ಕಿತ್ತುಕೊಂಡ ಬಂದ ಹೆಬ್ಬರಳಿನ ಉಗುರು
ಚಿಕ್ಕಮಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಕೆಸರು ಗದ್ದೆಯಲ್ಲಿ ಎರಡು ಬಾರಿ ಜಾರಿ ಬಿದ್ದು ಮತ್ತೆ ಎದ್ದು ಓಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಿಕ್ಕಮಗಳೂರಿನ ನಲ್ಲೂರಿನಲ್ಲಿ ಮೂರು ದಿನಗಳ ಕಾಲ ಉತ್ಸವದ ಅಂಗವಾಗಿ ಗ್ರಾಮೀಣ ಕ್ರೀಡೆ ಆಯೋಜನೆಗೊಂಡಿದೆ. ಇಂದು ಈ ಕ್ರೀಡೆಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದರು. ಸುಮಾರು ಅರ್ಧ ಅಡಿ ಆಳ ಇರುವಷ್ಟು ಕೆಸರು ಗದ್ದೆಯಲ್ಲಿ ಸಿ.ಟಿ ರವಿ ಓಡಿದ್ದಾರೆ.
ಸಿ.ಟಿ ರವಿ ಓಡುವಾಗ ಹಿಂದೆ ಮುಂದೆ ಇದ್ದ ಸ್ಪರ್ಧಿಗಳು ಕೂಗಿ ಕೇಕೆ ಹಾಕಿದರು. ಓಡುವಾಗ ಸಿ.ಟಿ ರವಿ ಜಾರಿ ಬಿದ್ದಿದ್ದಾರೆ. ಜಾರಿ ಬಿದ್ದ ನಂತರ ಅವರು ಅಲ್ಲಿಂದ ಹೋಗದೇ ಮತ್ತೆ ಓಡಿದ್ದಾರೆ. ಸಿ.ಟಿ ರವಿ ಮತ್ತೊಮ್ಮೆ ಓಡುವಾಗ ಎರಡನೇ ಬಾರಿಯೂ ಜಾರಿ ಬಿದ್ದಿದ್ದಾರೆ. ಆದರು ಸಹ ಹಿಂತಿರುಗದೇ ಮತ್ತೆ ಓಡಿದ್ದಾರೆ.
ಎರಡು ಬಾರಿ ಬಿದ್ದರೂ ಸಿ.ಟಿ ರವಿ ನಗುತ್ತಾ ತಮ್ಮ ಓಟವನ್ನು ಪೂರ್ಣಗೊಳಿಸಿದ್ದಾರೆ. ಫೆ.29 ಹಾಗೂ ಮಾರ್ಚ್ 1ರಂದು ಚಿಕ್ಕಮಗಳೂರು ಹಬ್ಬ ನಡೆಯಲಿದೆ. ಇಂದಿನಿಂದ ವಿವಿಧ ಗ್ರಾಮೀಣ ಕ್ರೀಡಾಕೂಟ ಆರಂಭವಾಗಿದೆ. ಕೇವಲ ಓಟ ಅಲ್ಲದೆ ಸಿ.ಟಿ ರವಿ ಹಗ್ಗಜಗ್ಗಾಟ ಸೇರಿದಂತೆ ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸಿದರು.
ಕೆಸರುಗದ್ದೆಯ ಹಗ್ಗಜಗ್ಗಾಟ ಕ್ರೀಡೆಯಲ್ಲಿ ಭಾಗವಹಿಸಿದ ವೇಳೆ ಸಿ.ಟಿ ರವಿ ಕಾಲಿನ ಹೆಬ್ಬರಳಿನ ಉಗುರು ಕಿತ್ತುಕೊಂಡಿದೆ. ಹೆಬ್ಬರಳಿನ ಉಗುರು ಬಂದರು ಅರಿವಿಲ್ಲದೆ ಸಿ.ಟಿ ರವಿ ಆಟದಲ್ಲಿ ಮೈ ಮರೆತ್ತಿದ್ದರು. ಬಳಿಕ ಕೆಸರು ಗದ್ದೆಯಿಂದ ಮೇಲೆ ಬಂದು ಕಾಲು ತೊಳೆಯುವಾಗ ಅರಿವಿಗೆ ಬಂದಿದೆ.