ಮಂಗಳೂರು: ಈ ಪಾತಕಿಗಳ ಸರ್ಕಾರವನ್ನು ಕೊನೆಗಾಣಿಸಬೇಕಾಗಿ ಇಂದು ಜನಸುರಕ್ಷಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದು ಕರಾವಳಿಯಿಂದ ಬೆಂಗಳೂರು ಕಡೆ ಬರುತ್ತಿದೆ ಅಂತ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಜರಿದಿದ್ದಾರೆ.
ಮಂಗಳೂರಿನ ಜನಸುರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು, ಆರುವ ದೀಪ ತುಂಬಾ ಉಜ್ವಲವಾಗಿ ಉರಿಯುತ್ತದೆ. ಹಾಗೇನೇ ಇದೀಗ ಆಳ್ವಿಕೆಯಲ್ಲಿರುವ ಈ ಪಾತಕಿಗಳ ಸರ್ಕಾರವನ್ನು ಕೊನೆಗಾಣಿಸಬೇಕು. ಇದು ಕರಾವಳಿಯಿಂದ ಬೆಂಗಳೂರು ಕಡೆ ಬರುತ್ತಿದೆ. ಈ ಸುನಾಮಿ ಬೆಂಗಳೂರಿಗೆ ತಲುಪುವುದಕ್ಕಿಂತ ಮುಂಚೆ ಸಿದ್ದರಾಮಯ್ಯನವರೇ ದಯವಿಟ್ಟು ಮನೆಗೆ ಹೊರಟೋಗ್ಬಿಡಿ ಅಂತ ವಾಗ್ದಳಿ ನಡೆಸಿದ್ರು.
ಇನ್ನು ಕೇವಲ ಎರಡು ತಿಂಗಳು ನಿಮಗೆ ಕಾನೂನು ಪ್ರಕಾರ ಸಮಯವಿದೆ. ಆ ಕಾನೂನು ಪ್ರಕಾರ ಸಮಯದಲ್ಲೂ ಕೂಡ ನೀವು ಕರ್ನಾಟಕದಲ್ಲಿ ಮುಂದುವರೆದ್ರೆ, ಖಂಡಿತವಾಗಿ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಅಧೋಗತಿಯನ್ನು ತಂದಿಡುತ್ತೀರಿ. ಅದಕ್ಕೋಸ್ಕರ ಈ ಕರವಾಳಿಯ ಸುನಾಮಿ ಬೆಂಗಳೂರಿಗೆ ತಲುಪೋದಕ್ಕಿಂತ ಮುಂಚೆ ಕೆಳಗಿಳಿದ್ರೆ ಸರಿ. ಇಲ್ಲವೆಂದಲ್ಲಿ ಈ ಕರವಾಳಿಯ ಸುನಾಮಿ ನಿಮ್ಮನ್ನು ಎಳೆದುಕೊಂಡು ಹೋಗುತ್ತೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಿಡಿ ಕಾರಿದ್ರು.
ನಮ್ಮ ಹಿಂದೂಗಳ ಓಟಿಗೆ ಬೆಲೆ ಇಲ್ಲವೇ ಸೋದರರೇ. ಕಳೆದ ನಾಲ್ಕೂವರೆ ವರ್ಷದಲ್ಲಿ 7748ಕ್ಕೂ ಹೆಚ್ಚು ಕೊಲೆ ನಡೆದಿದೆ. 9400 ಡಕಾಯಿತಿ, 7538 ರೇಪ್, 11900 ಕಿಡ್ನಾಪ್, 35 ಸಾವಿರ ಚೀಟಿಂಗ್ ಕೇಸ್, 11 ಲಕ್ಷ ಕ್ರಿಮಿನಲ್ ಕೇಸ್ ಆಗಿದೆ ಅಂದ್ರು.