ಲಕ್ನೋ: ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ಮಳೆಯಾಗುತ್ತಿದೆ. ಸತತ ಮಳೆಯಿಂದಾಗಿ ವಿಶ್ವವಿಖ್ಯಾತ ತಾಜ್ಮಹಲ್ ನ ಕಂಬವೊಂದು ಕುಸಿದು ಬಿದ್ದಿದೆ.
ಇಂದು ಬೆಳಗಿನ ಜಾವ ತಾಜ್ಮಹಲ್ ನ ದಕ್ಷಿಣ ಭಾಗದಲ್ಲಿಯ ಕಂಬ ಬಿದ್ದಿದೆ. ಘಟನೆ ವೇಳೆ ಯಾರು ಇಲ್ಲದಿದ್ದರಿಂದ ಅವಘಡವೊಂದು ತಪ್ಪಿದೆ.
ಆಗ್ರಾದ 50 ಕಿ.ಮೀ. ದೂರದ ಮಥುರಾ ಜಿಲ್ಲೆಯಲ್ಲಿ ಮಳೆಯಿಂದಾಗಿ ಮನೆಯೊಂದರ ಚಾವಣಿ ಕುಸಿದು ಬಿದ್ದ ಪರಿಣಾಂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ ಹೋದ ವೇಳೆ ಘಟನೆ ಸಂಭವಿಸಿದೆ.
ಉತ್ತರ ಪ್ರದೇಶ ರಾಜ್ಯದ ನಂದಗಾಂವ್, ವೃಂದಾವನ, ಕೋಸಿ ಕಲ್ಯಾಣ್ಗಳಲ್ಲಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.