Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಐಪಿಎಲ್ ಟಿಆರ್‌ಪಿ ದಿಢೀರ್ ಕುಸಿತ – ಇಲ್ಲಿದೆ ಅಸಲಿ ಕಾರಣ

Public TV
Last updated: April 15, 2022 7:34 pm
Public TV
Share
3 Min Read
IPL
SHARE

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಯುವ ಸಮೂಹಕ್ಕೆ ಒಂದು ಕ್ರೇಜ್. ಅತೀ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಹೊಳೆ ಹರಿಸುವ ಮೂಲಕ ಗಮನ ಸೆಳೆಯುವ ಈ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ದೇಶದಲ್ಲಿ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಹೋಟೆಲ್‌ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತದೆ.

ಅದರಲ್ಲೂ 2022ನೇ ಸಾಲಿನ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಎಷ್ಟೋ ಯುವ ತಾರೆಗಳಿಗೆ ವೇದಿಕೆಯಾಗಿದ್ದು, ಮತ್ತಷ್ಟು ಕ್ರೇಜ್ ಹುಟ್ಟಿಕೊಂಡಿದೆ. ಆದರೆ, ಪ್ರತಿ ವರ್ಷವೂ ಐಪಿಎಲ್ ವೇಳೆ ಹೆಚ್ಚಿನ ವೀಕ್ಷಕರಿಂದ ದೊಡ್ಡಮಟ್ಟದ ಆದಾಯ ತಂದುಕೊಡುತ್ತಿದ್ದ ಐಪಿಎಲ್‌ನಲ್ಲಿ ಈ ಬಾರಿ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಬಾರೀ ಇಳಿಕೆ ಕಂಡಿದೆ. ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ತೊರೆದ ಜೋ ರೂಟ್

IPL 2022 RR VS LSG

ಬಿಎಆರ್‌ಸಿ-ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್)ನೀಡುವ 2021ರ ಐಪಿಎಲ್ ಆವೃತ್ತಿಯ ಮೊದಲವಾರದಲ್ಲಿ ಟಿವಿ ರೇಟಿಂಗ್‌ಗಳಲ್ಲಿ ಶೇ.33 ರಷ್ಟು ಕುಸಿತ ಕಂಡಿದೆ. ಐಪಿಎಲ್ -2021ರ ಒಟ್ಟಾರೆ ಟಿವಿ ವೀಕ್ಷಕರ ಸಂಖ್ಯೆಗೆ ಹೋಲಿಸಿದರೆ 2022ರ ರಲ್ಲಿ ಶೇ.14 ರಷ್ಟು ರೇಟಿಂಗ್ಸ್ ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣಗಳನ್ನೂ ಇಲ್ಲಿವೆ.

IPL 2022 RR VS LSG

ಮುಂಬೈ- ಸಿಎಸ್‌ಕೆ ಕಳಪೆ ಪ್ರದರ್ಶನ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸಲ್ಲೇ ಹೆಚ್ಚಿನ ಮನ್ನಣೆ ಪಡೆದಿರುವ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕಳಪೆ ಪ್ರದರ್ಶನ ನೀಡುತ್ತಿವೆ. 9 ಬಾರಿ ಚಾಂಪಿಯನ್ ಪಟ್ಟಗಳನ್ನು ಅಲಂಕರಿಸಿರುವ ಎರಡೂ ತಂಡಗಳೂ ಗೆಲುವಿನ ಹಾದಿ ಹಿಡಿಯಲು ಹೆಣಗಾಡುತ್ತಿವೆ. ಕಳೆದ 4 ಪಂದ್ಯಗಳಲ್ಲೂ ಸತತ ಸೋಲು ಕಂಡಿದ್ದ ಚೆನ್ನೈ 5ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿತು. ಆದರೆ, ಭರವಸೆಯ ಮುಂಬೈ ತಂಡ ಸತತ 5 ಪಂದ್ಯಗಳಲ್ಲೂ ಮುಖಬಂಗ ಅನುಭವಿಸಿದೆ. ಮುಂಬೈ ತಂಡಕ್ಕೆ ಅತಿಹೆಚ್ಚು ಮೌಲ್ಯಕ್ಕೆ ಖರೀದಿಯಾದ ಈಶಾನ್‌ಕಿಶನ್ ಸಹ ಆರಂಭಿಕ ಎರಡು ಪಂದ್ಯಗಳನ್ನು ಹೊರತುಪಡಿಸಿದರೆ, ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದಿರುವುದ ತಂಡಕ್ಕೆ ದೊಡ್ಡ ಪೆಟ್ಟಾಗಿದೆ. ಇದನ್ನೂ ಓದಿ: ಪಾಂಡ್ಯ ಆಲ್‍ರೌಂಡರ್ ಆಟ ರಾಜಸ್ಥಾನ ಪರದಾಟ – ಮುಂದುವರಿದ ಗುಜರಾತ್ ಗೆಲುವಿನ ಓಟ

IPL 2022 RR VS LSG

ಕ್ರೇಜ್ ಹೆಚ್ಚಿಸಿದ್ದ ತಾರೆಯರೇ ನಾಪತ್ತೆ: ಪ್ರತಿ ಐಪಿಎಲ್ ಆವೃತ್ತಿಯಲ್ಲೂ ಒಂದು ಮೆಮೊರೆಬಲ್ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕ್ರೀಡಾ ಬದುಕಿನಿಂದ ನಿವೃತ್ತಿಯಾಗಿದ್ದಾರೆ. ಹಾಗೆಯೇ ವೆಸ್ಟ್ಇಂಡೀಸ್ ಮಾಜಿಕ್ರಿಕೆಟಿಗ ಕ್ರಿಸ್‌ಗೇಲ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಸುರೇಶ್ ರೈನಾ, ಜೋ ರೂಟ್ ಹೀಗೆ ರೇಸ್‌ನಲ್ಲಿದ್ದ ಕ್ರಿಕೆಟಿಗರು ಇಲ್ಲದಿರುವುದು ಐಪಿಎಲ್ ವೀಕ್ಷಕರ ಕೊರತೆಯಾಗಲು ಮುಖ್ಯ ಕಾರಣವಾಗಿದೆ.

ಆಟಗಾರರ ಬದಲಾವಣೆ: ತಮ್ಮ ನೆಚ್ಚಿನ ತಂಡಗಳಲ್ಲಿ ನೆಚ್ಚಿನ ಆಟಗಾರರು ಬದಲಾಗಿರುವುದೂ ಪ್ರೇಕ್ಷಕರ ವೀಕ್ಷಕರು ತಂಡಗಳ ಮೇಲಿನ ಉತ್ಸಾಹ ಕಳೆದುಕೊಳ್ಳುವಂತೆ ಮಾಡಿದೆ. ಆರ್‌ಸಿಬಿ ತಂಡದಲ್ಲಿದ್ದ ದೇವದತ್ ಪಡಿಕಲ್ ಹಾಗೂ ಯಜುವೇಂದ್ರಚಾಹಲ್ ರಾಜಾಸ್ತಾನ್ ತಂಡಕ್ಕೆ, ಡೇವಿಡ್ ವಾರ್ನರ್ ಡೆಲ್ಲಿ ತಂಡಕ್ಕೆ, ಇನ್ನೂ ಚೆನ್ನೂ ಸೂಪರ್‌ಕಿಂಗ್ಸ್‌ ನಲ್ಲಿ ಆರಂಭಿಕ ಆಟಗಾರನಾಗಿದ್ದ ಡು ಪ್ಲೆಸಿಸ್ ಆರ್‌ಸಿಬಿ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡಗಳ ಮೇಲಿನ ಅಭಿಮಾನ ಪ್ರಮುಖ ಆಟಗಾರರ ಮೇಲಿನ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ: ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ

ABD

ಓವರ್ ಡೋಸ್ ಐಪಿಎಲ್: ಕೋವಿಡ್ ಕಾರಣದಿಂದಾಗಿ ತಡವಾಗಿ ಆರಂಭಗೊಂಡ 2021ರ ಸಾಲಿನ ಐಪಿಎಲ್ ಟೂರ್ನಿಯು 6 ತಿಂಗಳ ಹಿಂದೆಯಷ್ಟೇ ಕೊನೆಗೊಂಡಿತ್ತು. ಮಧ್ಯಂತರಲ್ಲಿ ಮತ್ತೆ ಐಪಿಎಲ್ ಮುಂದೂಡಲಾಯಿತು. ಹೆಚ್ಚಿನ ಸಮಯದ ಅಂತರ ಸಿಗದೇ ಇರುವುದರಿಂದ ಕ್ರಿಕೆಟ್ ಪ್ರೇಕ್ಷಕರಿಗೆ ಓವರ್ ಡೋಸ್ ಕೊಂಟ್ಟಂತೆ ಆಗಿದ್ದು, ರೇಟಿಂಗ್ಸ್ ಕುಸಿತಕ್ಕೆ ಕಾರಣವಾಗಿದೆ.

IPL

ಹಾಟ್ ಸ್ಟಾರ್ ಹವಾ: ಕೇಬಲ್ ಟಿವಿಗಳಿಗಿಂತಲೂ ಅಗ್ಗದ ಬೆಲೆಗೆ ಸಿಗುತ್ತಿರುವ ಇಂಟರ್‌ನೆಟ್ ಸಹ ಟಿವಿ ವೀಕ್ಷರ ಕೊರತೆಗೆ ಕಾರಣವಾಗಿದೆ. ಶೇ.90 ರಷ್ಟು ಯುವ ಸಮೂಹ ಮೊಬೈಲ್ ಹಾಟ್‌ಸ್ಟಾರ್ ಪ್ಯಾಕೇಜ್‌ಗಳಲ್ಲೇ ಐಪಿಎಲ್ ವೀಕ್ಷಣೆ ಮಾಡುತ್ತಿದ್ದಾರೆ. ಕಳೆದ ಮರ‍್ನಾಲ್ಕು ಪಂದ್ಯಗಳಲ್ಲಿ 50 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರು ಹಾಟ್‌ಸ್ಟಾರ್‌ನಲ್ಲೇ ಐಪಿಎಲ್ ವೀಕ್ಷಿಸಿದ್ದಾರೆ. ಇದರಿಂದ ಸಹಜವಾಗಿಯೇ ಟಿವಿ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ.

TAGGED:AB de VilliersBenstrokesChennai Super KingsChrisGalecricketIPLMumbai Indianstvಎಬಿ ಡಿವಿಲಿಯರ್ಸ್ಐಪಿಎಲ್ಕ್ರಿಕೆಟ್ಕ್ರಿಸ್‍ಗೇಲ್ಚೆನ್ನೈ ಸೂಪರ್ ಕಿಂಗ್ಸ್ಟಿವಿಬೆನ್‌ಸ್ಟ್ರೋಕ್ಸ್‌ಮುಂಬೈ ಇಂಡಿಯನ್ಸ್
Share This Article
Facebook Whatsapp Whatsapp Telegram

You Might Also Like

ಸಾಂದರ್ಭಿಕ ಚಿತ್ರ
Districts

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ – ಜೂ.17ರಂದು ಶಾಲೆ, ಕಾಲೇಜುಗಳಿಗೆ ರಜೆ

Public TV
By Public TV
4 hours ago
Iran
Latest

ಭಾರತದ ಮನವಿಗೆ ಸ್ಪಂದಿಸಿ ಭೂ ಗಡಿ ತೆರೆದ ಇರಾನ್‌

Public TV
By Public TV
4 hours ago
Mantralayam Prahlad Joshi
Districts

ಮಂತ್ರಾಲಯ | ಗುರುರಾಯರ ದರ್ಶನ ಪಡೆದ ಪ್ರಹ್ಲಾದ್ ಜೋಶಿ

Public TV
By Public TV
5 hours ago
Crocodile found in a pothole on the side of the road People are worried Hunagunda Bagalkote
Bagalkot

ಬಾಗಲಕೋಟೆ| ರಸ್ತೆಯ ಪಕ್ಕದ ಗುಂಡಿಯಲ್ಲಿ ಮೊಸಳೆ ಪತ್ತೆ – ಜನರಲ್ಲಿ ಆತಂಕ

Public TV
By Public TV
5 hours ago
Davangere Farmers Complaint
Crime

ರೈತರಿಗೆ ಸಿಎಂ ಭದ್ರತಾ ಸಿಬ್ಬಂದಿ ಒದ್ದ ಆರೋಪ – ದೂರು ದಾಖಲು

Public TV
By Public TV
5 hours ago
Laxman Savadi
Bengaluru City

2028ಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ಲಕ್ಷ್ಮಣ್ ಸವದಿ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?