ವಿಜಯಪುರ: ಈಗಿನ ಗೃಹ ಸಚಿವರಿಗೆ ಫಾರೆಸ್ಟ್ ಅಥವಾ ಕಂದಾಯ ಖಾತೆ ಕೊಡಿ. ನನಗೆ ಗೃಹ ಖಾತೆ ಕೊಟ್ಟು ನೋಡಿ ಮಂಗಳೂರಿನಲ್ಲಿ ಗಲಾಟೆ ಮಾಡಿದವರಿಗೆ ತಕ್ಕ ಪಾಠ ಕಲಿಸ್ತೀನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ವಿಜಯಪುರ ನಗರದ ರಂಗಮಂದಿರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿ ಮತ್ತು ಮಂಗಳೂರಿನಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ಈಗಿನ ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಈಗಿರುವ ಗೃಹ ಸಚಿವರು ಉತ್ತಮವಾಗಿದ್ದಾರೆ, ಗೃಹ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಆದರೂ ಅವರಿಗೆ ಫಾರೆಸ್ಟ್ ಅಥವಾ ಕಂದಾಯ ಖಾತೆ ಕೊಡಿ ನನಗೆ ಗೃಹ ಸಚಿವ ಸ್ಥಾನ ಕೊಟ್ಟು ನೋಡಿ ಎಂದರು. ಇದನ್ನೂ ಓದಿ: ರಾತ್ರಿ ಬಂದು ಮಸಿ ಹಚ್ಚೋ ಅಯೋಗ್ಯರಿಗೆ ಗೃಹ ಸಚಿವರು ಏನು ಮಾಡ್ಬೇಕು: ಯತ್ನಾಳ್
ನನಗೆ ಗೃಹ ಖಾತೆ ಕೊಟ್ಟರೆ ಎಲ್ಲರಿಗೂ ಹೇಗೆ ಉತ್ತರ ಕೊಡುತ್ತೇನೆ ನೋಡಿ. ಈಗಿನ ಗೃಹ ಸಚಿವರಿಗೆ ಫಾರೆಸ್ಟ್ ಅಥವಾ ಕಂದಾಯ ಖಾತೆ ಕೊಡಿ. ನನಗೆ ಗೃಹ ಖಾತೆ ಕೊಟ್ಟು ನೋಡಿ ಪುಂಡರನ್ನು ಹೆಡೆಮುರಿ ಕಟ್ಟುತ್ತೇನೆ. ಪೊಲೀಸರ ಮೇಲೆ ದಾಳಿ ಮಾಡಿದರೆ ಸುಮ್ಮನಿರಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಕರ್ನಾಟಕದ ಕಾರಿನ ಮೇಲೆ ಶಿವಸೇನೆ ಪುಂಡರಿಂದ ಕಲ್ಲು ತೂರಾಟ