ದಾವಣಗೆರೆ: ಚಳಿಯನ್ನು ಲೆಕ್ಕಿಸದೇ ಬೀದಿಯಲ್ಲಿ ಮಲಗಿಕೊಂಡು ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದ ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ದಾವಣಗೆರೆಯ ವ್ಯಾಪಾರಿ ಸೋಗಿ ಆರ್ ಶಿವಯೋಗಿ ಎಂಬವರು ಸ್ವೆಟರ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ನಗರದ ಗುಂಡಿ ಸರ್ಕಲ್ ಬಳಿ ಅಸ್ಸಾಂ, ಬಿಹಾರದಿಂದ ಬಂದಂತಹ ಹತ್ತಾರು ಕುಟುಂಬಗಳು ಗೃಹ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಅವರನ್ನೇ ನಂಬಿಕೊಂಡು ಬಂದಿರುವ ಮಕ್ಕಳ ಪ್ರತಿನಿತ್ಯ ಚಳಿಯಲ್ಲಿ ಬೀದಿ ಬದಿಯಲ್ಲಿ ಮಲಗಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.
ಇದನ್ನು ನೋಡಿದ ವ್ಯಾಪಾರಿ ಸೋಗಿ ಆರ್ ಶಿವಯೋಗಿ ಹಾಗೂ ಅವರ ಕುಟುಂಬದವರು ಮಕ್ಕಳಿಗೆ ಸೇರಿದಂತೆ ಬಡ ಕುಟುಂಬದವರಿಗೆ ಸ್ವೆಟರ್ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸುಮಾರು 80ಕ್ಕೂ ಹೆಚ್ಚು ನಿರ್ಗತಿಕರಿಗೆ ಸ್ವೆಟರ್ ದಾನ ಮಾಡಿದ್ದಾರೆ.
ಮನೆ ಇರುವವರು ಬೆಚ್ಚಗೆ ಮನೆಯಲ್ಲಿ ಮಲಗಿಕೊಳ್ಳುತ್ತಾರೆ. ಆದರೆ ಮನೆ ಇಲ್ಲದೇ ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡು ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಜನರು ಚಳಿಯಲ್ಲೇ ಮಲಗಿಕೊಳ್ಳುತ್ತಿದ್ದರು. ಅಂತಹವರಿಗೆ ನಮ್ಮದೊಂದು ಸಣ್ಣ ಕಾಣಿಕೆಯಾಗಿ ಈ ರೀತಿಯ ಸಹಾಯ ಮಾಡಿದ್ದೇವೆ. ಇದರಲ್ಲಿ ನಮಗೆ ತೃಪ್ತಿ ತಂದಿದೆ ಎಂದು ಆನಂದ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv