ಮಂಡ್ಯ: ನಮ್ಮ ಭಾರತೀಯ ಮಗನನ್ನು ಬಲಿ ತೆಗೆದುಕೊಂಡವರು ಭೂಮಿಯ ಮೇಲೆ ಉಳಿಯಬಾರದು. ನಮ್ಮ ಭಾರತದ ಮೇಲೆ ಮತ್ತೆ ಯಾವತ್ತೂ ಉಗ್ರರು ದಾಳಿ ಮಾಡಲು ಮುಂದಾಗಬಾರದು ಎಂದು ಹುತಾತ್ಮ ಗುರು ಅವರ ತಂದೆ ಹೊನ್ನಯ್ಯ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ದಾಳಿ ನಡೆಸಿದ ಭಾರತೀಯ ಸೈನ್ಯಕ್ಕೆ ಧನ್ಯವಾದ ಅರ್ಪಿಸಿದರು. ಬಳಿಕ ನಿಜವಾದ ಗಂಡಸರೇ ಆದರೆ ಭಾರತ ದೇಶಕ್ಕೆ ಬರಲಿ. ಹೇಡಿಗಳ ರೀತಿ ಬಚ್ಚಿಟ್ಟುಕೊಂಡಿದ್ದಾರೆ. ಅವರ ಮೇಲೆ ಇನ್ನೂ ದಾಳಿ ನಡೆಸಬೇಕು, ನಮ್ಮನ್ನ ಕಣ್ಣೆತ್ತಿ ಕೂಡ ನೋಡಬಾರದು. ಆ ರೀತಿ ಮಾಡಬೇಕು. ನಮ್ಮ ದೇಶದ ಜನರನ್ನ ಕಂಡರೆ ನಡುಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ನಮಗೆ ಆಗಿರುವ ಅನ್ಯಾಯ ಮತ್ತೆ ಯಾರಿಗೂ ಆಗಬಾರದು. ಭೂಮಿಯ ಮೇಲೆ ಉಗ್ರರನ್ನು ಬೇರು ಸಮೇತ ಕಿತ್ತು ಹಾಕಬೇಕು. ಉಗ್ರರು ಎಷ್ಟು ಜನರಿದ್ದರೆ ಅವರನ್ನು ಹುಡುಕಿ ಹುಡುಕಿ ಕೊಲ್ಲಬೇಕು. ಇನ್ನು ಉಳಿದವರು ಮುಂದೆ ಭಾರತದ ಮೇಲೆ ಕೈ ಎತ್ತಬಾರದು. ಭಾರತದ ಜನರನ್ನು ಕಂಡರೆ ಭಯ ಪಡಬೇಕು ಎಂದು ಅವರು ತಿಳಿಸಿದ್ದಾರೆ.
ಭಾರತದವರು ಏನು ಮಾಡುತ್ತಾರೆ ಎನ್ನುವ ಭಯದಲ್ಲಿಯೇ ಉಗ್ರರು ಇರಬೇಕು. ನಮ್ಮವರನ್ನು ಅವರು ಮೋಸದಿಂದ ಕೊಲೆ ಮಾಡಿದ್ದಾರೆ. ಈಗ ಬಿಟ್ಟರೆ ಮತ್ತೆ ಅವರು ಸಿಗುವುದಿಲ್ಲ. ನಮ್ಮವರು ಉಗ್ರರನ್ನು ಮೋಸದಿಂದ ಕೊಲೆ ಮಾಡುತ್ತಿಲ್ಲ. ರಿಯಲ್ ಆಗಿ ಕೊಲೆ ಮಾಡುತ್ತಿದ್ದೀವಿ ಎಂದರು.
https://www.youtube.com/watch?v=G0QMmWYgOEU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv