ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಎಂಇಎಸ್ ಪಕ್ಷದ ಅಭ್ಯರ್ಥಿಗೆ ಮರಾಠಿ ಯುವಕರೇ ಘೇರಾವ್ ಹಾಕಿದ್ದಾರೆ.
ಎಂಇಎಸ್ ಅಭ್ಯರ್ಥಿ ಬಾಳಾಸಾಹೇಬ ಕಾಕತಕರ ಮತಯಾಚನೆಗಾಗಿ ಬೆಳಗಾವಿ ಪಟ್ಟಣದ ಶಿವಾಜಿ ನಗರಕ್ಕೆ ತೆರಳಿದ್ದರು. ಈ ವೇಳೆ ಬಾಳಾಸಾಹೇಬ ನಗರಕ್ಕೆ ಆಗಮಿಸುತ್ತಿದ್ದಂತೆ ಕೋಪಗೊಂಡ ಕೆಲ ಮರಾಠಿ ಭಾಷಿಕ ಯುವಕರು ಆರಂಭದಲ್ಲೇ ಅವರನ್ನು ತಡೆದಿದ್ದಾರೆ.
ಮರಾಠಿ ಹೆಸರಲ್ಲಿ ವೋಟ್ ಕೇಳ್ತಿರಿ, ಆಮೇಲೆ ನಮ್ಮನ್ನು ನಿರ್ಲಕ್ಷ್ಯ ಮಾಡ್ತೀರಿ. ನಿಮ್ಮಿಂದಾಗಿ ಮರಾಠಾ ಸಮುದಾಯಕ್ಕೆ ಯಾವುದೇ ಕೊಡುಗೆಗಳಿಲ್ಲ. ಇದೂವರೆಗೂ ಎಂಇಎಸ್ ಮರಾಠಿಗರ ಅಭಿವೃದ್ಧಿ ಮಾಡು ವಲ್ಲಿ ವಿಫಲಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕವಾಗಿ ಮರಾಠಿ ಭಾಷಿಕರಿಂದಲೇ ತರಾಟೆಗೊಳಗಾದ ಬಾಳಾಸಾಹೇಬ ತೀವ್ರ ಮುಜುಗರಕ್ಕೊಳಗಾದ್ರು.