ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಂಭ್ರಮ ಮನೆಮಾಡಿದ್ದು, ಮಹಾ ರಥೋತ್ಸವ ಮೂಲಕ ವಿದ್ಯುಕ್ತ ತೆರೆ ಬಿದ್ದಿದೆ.
ಆರಾಧನೆಯ ಸಂಭ್ರಮದ ಕೊನೆಯ ದಿನವಾದ ಶನಿವಾರ ಉತ್ತರ ಆರಾಧನೆಯಾಗಿ ಮಂತ್ರಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನ ನೇರವೇರಿಸಲಾಗಿದೆ. ಉತ್ಸವ ಮೂರ್ತಿ ಪ್ರಹಲ್ಲಾದ ರಾಜರ ರೂಪದಲ್ಲಿ ರಾಯರು ಭಕ್ತರಿಗೆ ಬಹಿರ್ಮುಖ ದರ್ಶನ ನೀಡಿ ಆಶೀರ್ವದಿಸುತ್ತಾನೆ ಅನ್ನೋ ನಂಬಿಕೆಯಿದೆ. ಉತ್ಸವ ಮೂರ್ತಿಯನ್ನ ರಥೋತ್ಸವಕ್ಕೂ ಮುನ್ನ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗಿತ್ತು.
ಶಾಲೆಯ ಪಾಠಗಳನ್ನ ರಾಯರು ಪರಿಶೀಲಿಸುತ್ತಾರೆ ಅನ್ನೋ ನಂಬಿಕೆಯಿದೆ. ನಂತರ ರಾಯರಿಗೆ ಓಕುಳಿ ಎರಚಿ ಮಠದ ಪೀಠಾಧಿಪತಿಗಳು ವಸಂತೋತ್ಸವ ಆಚರಿಸಿದ್ದಾರೆ. ಇದಾದ ಬಳಿಕ ಮಠದ ಬೀದಿಯಲ್ಲಿ ಮಹಾ ರಥೋತ್ಸವ ನಡೆದಿದೆ.
ರಾಯರ ರಥೋತ್ಸವದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಮತ್ತು ಅವರ ಸಹೋದರ ಕೋಮಲ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಮಾತನಾಡಿದ ಅವರು, ನಾನು ಚಿಕ್ಕವನಿದ್ದಾಗಿನಿಂದಲೂ ರಾಯರ ಭಕ್ತ. ನನ್ನನ್ನು ರಾಯರ ಸನ್ನಿಧಾನದಲ್ಲಿ ಕುರಿಸಿ ಪ್ರಾರ್ಥಿಸಲು ಸ್ವಾಮೀಜಿಗಳು ಅವಕಾಶ ನೀಡಿದ್ದಾರೆ. ಇದು ನನ್ನ ಸೌಭಾಗ್ಯ ಎಂದರು.