ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ

Public TV
1 Min Read
Mantralaya 350 Aradhana Mahotsava - Maha Rathotsava (4)

ರಾಯಚೂರು: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ 350 ನೇ ಆರಾಧನಾ ಮಹೋತ್ಸವದ ಭಾಗವಾಗಿ ಶ್ರೀ ಮಠದಲ್ಲಿಂದು ರಾಯರ ಉತ್ತರರಾಧನೆ ಸಂಭ್ರಮದಿಂದ ನಡೆಯುತ್ತಿದೆ.

Mantralaya 4

ರಾಯರು ವೃಂದಾವನಸ್ಥರಾದ ಮರುದಿನವನ್ನ ಉತ್ತರರಾಧಾನೆಯಾಗಿ ಆಚರಿಸಲಾಗುತ್ತದೆ. ಇಂದು ರಾಯರು ಬಹಿರ್ಮುಖರಾಗಿ ರಾಜಬೀದಿಗಳಲ್ಲಿ ಬರ್ತಾರೆ ಅನ್ನೋ ನಂಬಿಕೆಯಿದೆ. ಮಠದ ಶ್ರೀಗಳಿಂದ ರಾಯರಿಗೆ ಬಣ್ಣಗಳ ಸಮರ್ಪಣೆ ನಡೆಯುತ್ತದೆ. ವಿವಿಧ ಬಣ್ಣಗಳನ್ನ ಗುರಾಜರಿಗೆ ಸಮರ್ಪಿಸಿ ಶ್ರೀಗಳು ಹಾಗೂ ಮಠದ ಸಿಬ್ಬಂದಿ ವಸಂತೋತ್ಸವ ಆಚರಿಸುತ್ತಾರೆ.

Mantralaya 3

ಉತ್ತರಾರಾಧನೆ ಹಿನ್ನೆಲೆ ಮಹಾರಥೋತ್ಸವ ನಡೆಯಲಿದ್ದು, ಇದಕ್ಕೂ ಮುನ್ನ ಪಲ್ಲಕ್ಕಿಯಲ್ಲಿ ಸಂಸ್ಕೃತ ವಿದ್ಯಾಪೀಠ ಶಾಲೆಗೆ ಉತ್ಸವ ಮೂರ್ತಿ ಪ್ರಹ್ಲಾದರಾಜರ ಮೆರವಣಿಗೆ ನಡೆಯುತ್ತದೆ. ಬಳಿಕ ಮಠದ ರಾಜಬೀದಿಯಲ್ಲಿ ಇಂದು ಮಹಾ ರಥೋತ್ಸವ ನಡೆಯಲಿದೆ. ಸಪ್ತರಾತ್ರೋತ್ಸವದ ಮುಖ್ಯ ಮೂರು ದಿನಗಳ ಸಂಭ್ರಮಕ್ಕೆ ಇಂದು ತೆರೆಬೀಳಲಿದೆ. ಆಗಸ್ಟ್ 27ರ ವರೆಗೆ ಸಪ್ತರಾತ್ರೋತ್ಸವ ನಡೆಯಲಿದ್ದು ಮಠದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ: ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

Mantralaya 1

ಆರಾಧನಾ ಮಹೋತ್ಸವ ಹಿನ್ನೆಲೆ ಬೆಳಗ್ಗೆಯಿಂದ ಮಠದಲ್ಲಿ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಮೂಲರಾಮದೇವರಿಗೆ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇದನ್ನೂ ಓದಿ: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಳೆಕಟ್ಟಿದ ರಾಯರ ಆರಾಧನೆ

Share This Article
Leave a Comment

Leave a Reply

Your email address will not be published. Required fields are marked *