ರಾಯಚೂರು: ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರ 54ನೇ ಜನ್ಮದಿನವನ್ನು ವರ್ಧಂತಿ ಉತ್ಸವವಾಗಿ ಭಕ್ತರು ಮಠದಲ್ಲಿ ಅದ್ದೂರಿಯಾಗಿ ಆಚರಿಸಿದರು.ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕರೆದ ಗಂಡನಿಗೆ ಚಾಕು ಇರಿದ ಭಾಮೈದ!
ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳೊಂದಿಗೆ ವರ್ಧಂತಿ ಉತ್ಸವ ಆಚರಿಸಿ, ತುಳಸಿ ವನದಲ್ಲಿ ಸಸಿ ನೆಡಲಾಯಿತು. ಸ್ವಾಮೀಜಿಗಳು ಭಕ್ತರಿಗೆ ವೃಕ್ಷ ಪ್ರಸಾದ ನೀಡುವ ಮೂಲಕ ಆಶೀರ್ವದಿಸಿದರು. ಬಳಿಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಉಂಜಾಲ ಮಂಟಪದಲ್ಲಿ ಭಕ್ತರು ಶ್ರೀಗಳ ತುಲಾಭಾರ ಕಾರ್ಯಕ್ರಮ ನೆರವೇರಿಸಿ, ಆಶೀರ್ವಾದ ಪಡೆದರು. ಇದೇ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಇದನ್ನೂ ಓದಿ: ಬಿಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ- ಗುರುವಾರ ಒಂದೇ ದಿನ 58 ಬಲಿ