ರಾಯಚೂರು: ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಸಂಭ್ರಮ ಮನೆ ಮಾಡಿದ್ದು, ಭಕ್ತರು ವಿಶೇಷ ಸೇವೆಗಳನ್ನ ಸಲ್ಲಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದ ಭಕ್ತರು ಗುರು ವೈಭವೋತ್ಸವ ಸಂಭ್ರಮ ಹಿನ್ನೆಲೆ ವಿಶೇಷ ಬೃಹತ್ ರಂಗೋಲಿ ಸೇವೆಯನ್ನ ಮಾಡಿದ್ದು, ನೋಡುಗರಲ್ಲಿ ಬೆರಗು ಹುಟ್ಟಿಸಿದೆ.
Advertisement
ಮಾ.1 ರ ರಾತ್ರಿ 10 ಗಂಟೆಯಿಂದ ಇಂದು ಬೆಳಗ್ಗೆ 7 ಗಂಟೆ ವರೆಗೂ ರಂಗೋಲಿ ಸೇವೆ ಮಾಡಿ ಬೃಹತ್ ರಂಗೋಲಿ ಬಿಡಿಸಿದ್ದಾರೆ. ಏಳು ಜನರ ತಂಡ ವಿಶೇಷ ರಂಗೋಲಿ ಸೇವೆಯನ್ನ ನೆರವೇರಿಸಿದೆ. ಸುವರ್ಣ ಕೇಶವ್, ಅಮೃತ, ಜ್ಯೋತಿ, ಮಂಗಳ ಪ್ರೇಮಲತಾ, ಗುರುರಾಜ್, ಸುರೇಶ್ ಎಂಬವರ ತಂಡ ರಂಗೋಲಿ ಸೇವೆ ಮಾಡಿದೆ.
Advertisement
ಶ್ರೀಮಠದ ಹೊರಭಾಗದ ಪ್ರಾಂಗಣದಲ್ಲಿ ಬಿಡಿಸಲಾದ ಬೃಹತ್ ರಂಗೋಲಿಯನ್ನ ವೀಕ್ಷಿಸಿದ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಣ್ಣ ಬಣ್ಣದ ಬೃಹತ್ ರಂಗೋಲಿ ನೋಡುಗರನ್ನ ಬೆರಗುಗೊಳಿಸುತ್ತಿದೆ.