ರಾಮನಗರ: ನಾಡಬಾಂಬ್ (Land Bomb) ಸಿಡಿದು ವ್ಯಕ್ತಿಯ ಕೈ ಛಿದ್ರವಾಗಿರುವ ಘಟನೆ ಕನಕಪುರ (Kanakapura) ತಾಲೂಕಿನ ನೇರಳಹಳ್ಳಿದೊಡ್ಡಿ ಗ್ರಾಮದಲ್ಲಿ ನಡೆದಿದೆ.
ನೇರಳೆದೊಡ್ಡಿ ಗ್ರಾಮದ ರೈಸ್ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ಮೂಲದ ನೌಷದ್ ಪಾಷ (29) ಗಂಭೀರವಾಗಿ ಗಾಯಗೊಂಡಿದ್ದಾನೆ. ರೈಸ್ ಮಿಲ್ ಹಿಂಭಾಗ ಬಿದ್ದಿದ್ದ ಚೆಂಡಿನ ರೀತಿಯ ವಸ್ತುವನ್ನು ನಾಡಬಾಂಬ್ ಎಂದು ತಿಳಿಯದೇ ಕೈಯಲ್ಲಿ ಹಿಡಿದಿದ್ದಾಗ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ನೌಷದ್ ಪಾಷ ಕೈ ಛಿದ್ರಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: UPಗೆ ಯೋಗಿ ಆದಿತ್ಯನಾಥ್, ರಾಜಸ್ಥಾನಕ್ಕೆ ಬಾಲಕನಾಥ್ – ಸಿಎಂ ರೇಸ್ನಲ್ಲಿ ಮತ್ತೊಬ್ಬರು ಯೋಗಿ
ಇನ್ನೂ ಅದೇ ಸ್ಥಳದಲ್ಲಿ ಮತ್ತೆರಡು ನಾಡಬಾಂಬ್ಗಳು ಪತ್ತೆಯಾಗಿದ್ದು, ಕಾಡು ಹಂದಿಗಳನ್ನು ಹೊಡೆಯಲು ನಾಡಬಾಂಬ್ ಇಟ್ಟಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮತ್ತೆ ಮಾಮಾಜಿ ಮ್ಯಾಜಿಕ್ – ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗಿದ್ದು ಹೇಗೆ?