ವೈದ್ಯರ ಬಳಿ ತೆರಳ್ತಿದ್ದ ತಾಯಿ, ಮಗು ಬಸ್ಸಿನಡಿ ಸಿಲುಕಿ ದುರ್ಮರಣ

Public TV
1 Min Read
MNG ACCIDENT

ಮಂಗಳೂರು: ಬಸ್ಸಿನಡಿ ಬಿದ್ದು ತಾಯಿ, ಮಗು ದುರ್ಮರಣಕ್ಕೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲುಖಿನ ಉಪ್ಪಿನಂಗಡಿ ಬಳಿ ನಡೆದಿದೆ.

ಮೃತರನ್ನು ದುರ್ದೈವಿಗಳನ್ನು ಶಾಹಿದಾ (25) ಹಾಗೂ ಆಕೆಯ 1 ವರ್ಷದ ಪುತ್ರ ಶಾಹೀಲ್ ಎಂದು ಗುರುತಿಸಲಾಗಿದೆ. KSRTC ಬಸ್ಸೊಂದು ಅತೀ ವೇಗವಾಗಿ ಬಸ್ ನಿಲ್ದಾಣಕ್ಕೆ ಬಂದಿದೆ. ಈ ವೇಳೆ ಶಾಹಿದಾ ಹಾಗೂ ಆಕೆಯ ಪುತ್ರ ಬಸ್ಸಿನ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

MNG ACCIDENT 2

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿಯಾಗಿರುವ ಶಾಹಿದಾ, ಗೇರುಕಟ್ಟೆಯಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದರು. ಇಂದು ಬೆಳಗ್ಗೆ ತನ್ನ ಮಗನೊಂದಿಗೆ ಪುತ್ತೂರಿನಲ್ಲಿರುವ ವೈದ್ಯರ ಬಳಿ ತೆರಳುತ್ತಿದ್ದರು. ಹೀಗಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ಶಾಹಿದಾ ಹಾಗೂ ಆಕೆಯ ಪುತ್ರನ ತಲೆ ಮೇಲೆ ಬಸ್ ಹರಿದಿದ್ದರಿಂದ ಇಬ್ಬರ ದಾರುಣ ಸಾವಾಗಿದೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

MNG ACCIDENT 1

ಘಟನೆ ಸಂಬಂಧ ಉಪ್ಪಿನಗಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *