ಮಂಗಳೂರು: ಕ್ಷುಲ್ಲಕ ಕಾರಣಕ್ಕೂ ದುಷ್ಕರ್ಮಿಗಳು ಹತ್ಯೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ಕೊಲೆಯೊಂದು ಸಾಕ್ಷಿಯಾಗಿದೆ. ಕೂಲಿಯ ಹಣ ನೀಡದ ವೃದ್ಧೆಯನ್ನು ವ್ಯಕ್ತಿಯೊಬ್ಬ ಬರ್ಬವಾಗಿ ಕೊಲೆಗೈದಿದ್ದಾನೆ.
ಮಂಗಳೂರಿನ ಮೂಲ್ಕಿ ಸಮೀಪದ ಪರಂಕಿಲಯ ನಿವಾಸಿ ಶಾರದಾ ಶೆಟ್ಟಿ (75) ಕೊಲೆಯಾದ ವೃದ್ಧೆ. ಅದೇ ಗ್ರಾಮದ ನಿವಾಸಿ ತುಕರಾಮ ಶೆಟ್ಟಿ (54) ಕೊಲೆ ಮಾಡಿದ ಆರೋಪಿ. ತುಕರಾಮ ಶೆಟ್ಟಿ ಶನಿವಾರ ತಡರಾತ್ರಿಯೇ ಕೊಲೆಗೈದಿದ್ದ.
ಶಾರದಾ ಶೆಟ್ಟಿ ಅವರು ಭಾನುವಾರ ಬೆಳಗ್ಗೆ ತಮ್ಮ ಮನೆಯ ಅಂಗಳದಲ್ಲಿ ಬರ್ಬರವಾಗಿ ಹತ್ಯೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿಯ ಬಂಧನಕ್ಕೆ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ತುಕರಾಮ ಶೆಟ್ಟಿಯನ್ನು ವಿಚಾರಿಸಿದಾಗ, ನಾನು ಶಾರದಾ ಶೆಟ್ಟಿಯವರ ಮನೆಯ ಕೆಲವು ಕಾಮಗಾರಿಗಳನ್ನು ಮಾಡಿದ್ದೆ. ಆದರೆ ಅದರ ಹಣವನ್ನು ಅವರು ನೀಡಲಿಲ್ಲ. ಪದೇ ಪದೇ ಕೇಳಿದರೂ ನೀಡಲಿಲ್ಲ. ಹೀಗಾಗಿ ಶಮಿವಾರ ರಾತ್ರಿ ಶಾರದಾ ಶೆಟ್ಟಿ ಅವರ ಮನೆಗೆ ನುಗ್ಗಿ ಹತ್ಯೆ ಮಾಡಿದ್ದೇನೆ ಎಂದು ಬಾಯಿ ಬಿಟ್ಟಿದ್ದಾನೆ. ಈ ಸಂಬಂಧ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಜೈಲಿಗಟ್ಟಿದ್ದಾರೆ.