ಮಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುದೆಮುಗೇರು ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ಸಮೀಪದ ರೆಂಕೆದಗುತ್ತು ನಿವಾಸಿ ಚಿದಾನಂದ ಶೆಟ್ಟಿ ಹಾಗೂ ಸಂಗೀತಾ ನೇಣಿಗೆ ಶರಣಾದವರು. ಎರಡು ಮದುವೆಯಾಗಿದ್ದ ಚಿದಾನಂದ, ಸಂಗೀತಾಳ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದನು ಎನ್ನಲಾಗಿದೆ.
ಮೊದಲ ಪತ್ನಿಗೆ ವಿಚ್ಚೇದನ ನೀಡಿ ಎರಡನೇ ಮದುವೆಯಾಗಿದ್ದ ಚಿದಾನಂದ, ಪತ್ನಿ ಇದ್ದರೂ ಬೇರೊಬ್ಬ ಯುವತಿ ಜೊತೆ ಸಂಬಂಧ ಹೊಂದಿದ್ದನು. ಈ ಅನೈತಿಕ ಸಂಬಂಧ ತಿಳಿದು ಮನೆಯಲ್ಲಿ 2ನೇ ಪತ್ನಿ ಗಲಾಟೆ ಕೂಡ ನಡೆಸಿದ್ದಳು. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಸುದೆಮುಗೇರಿನ ಬಾಡಿಗೆ ಕೊಠಡಿಯಲ್ಲಿ ಯುವತಿ ಜೊತೆ ಸೇರಿಕೊಂಡು ಚಿದಾನಂದ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.