ಮಂಗಳೂರು: ದೇಶದಿಂದ ಬಂದ ಕೇರಳಿಗರಿಗೆ ಖಾಸಗಿ ವಾಹನ ಬಳಸುವಿಕೆಯನ್ನು ಮಂಗಳೂರು ವಿಮಾನ ನಿಲ್ದಾನದಲ್ಲಿ ಜಿಲ್ಲಾಡಳಿತ ನಿಷೇಧಿಸಿದೆ.
ಕೇರಳದಿಂದ ಬಂದ ಪ್ರಯಾಣಿಕರಿಗೆ ಜಿಲ್ಲಾಡಳಿತ ಸರ್ಕಾರಿ ಬಸ್ ಸೇವೆ ಕಲ್ಪಿಸಿದೆ. ಕರ್ನಾಟಕದ ಸರ್ಕಾರಿ ಬಸ್ ನಲ್ಲಿ ಕೇರಳದ ಗಡಿವರೆಗೂ ಡ್ರಾಪ್ ಮಾಡಲಾಗುತ್ತಿದೆ. ಇಂದು ದುಬೈನಿಂದ ಬಂದ ಪ್ರಯಾಣಿಕರನ್ನು 3 ಬಸ್ ನಲ್ಲಿ ತಲಪಾಡಿಯವರೆಗೂ ಬಿಡಲಾಗಿದೆ.
ವಿಮಾನದಲ್ಲಿ ಬಂದ ಪ್ರಯಾಣಿಕರು ತಲಪಾಡಿಯಿಂದ ತಮ್ಮ ಖಾಸಗಿ ವಾಹನಗಳಲ್ಲಿ ಕೇರಳಕ್ಕೆ ಪ್ರಯಾಣ ಬೆಳಸಬೇಕಿದ್ದು, ವಿದೇಶದಿಂದ ಬಂದವರಿಗೆ ಮಂಗಳೂರಿನಲ್ಲಿ ಸುತ್ತಾಡಲು ನಿರ್ಬಂಧ ಹೇರಲಾಗಿದೆ. ವಿದೇಶದಿಂದ ಬಂದವರು ವಿಮಾನ ನಿಲ್ದಾಣದಿಂದ ಸೀದಾ ಬಸ್ ಹತ್ತಬೇಕು ಎಂದು ಕಟ್ಟಪ್ಪಣೆ ಮಾಡಲಾಗಿದೆ.