ನೇತ್ರಾವತಿಯಲ್ಲಿ ನೀರಿಲ್ಲ – ಧರ್ಮಸ್ಥಳ ದೊಂಡೋಲೆ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ

Public TV
0 Min Read
collage mosale

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬರದೇ ನೀರಿನ ಸಮಸ್ಯೆ ಜಾಸ್ತಿಯಾಗುತ್ತಿದೆ. ಈ ಬರದ ಪರಿಣಾಮ ನೀರಲ್ಲದ ಬಾವಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.

ಪುಣ್ಯಕ್ಷೇತ್ರ ಧರ್ಮಸ್ಥಳ ಸಮೀಪ ಇರುವ ದೊಂಡೋಲೆ ಗ್ರಾಮದ ದಾಮೋದರ್ ಅವರ ಮನೆಯ ಬಾವಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ.

netravati

ಬರದ ಹಿನ್ನೆಲೆಯಲ್ಲಿ ನೇತ್ರಾವತಿ ನೀರಿಲ್ಲದೆ ಬತ್ತಿಹೋಗಿದೆ. ಈ ಕಾರಣಕ್ಕೆ ನೀರನ್ನು ಅರಸಿ ನೇತ್ರಾವತಿ ನದಿ ತಟದಲ್ಲಿರುವ ದೊಂಡೋಲೆ ಗ್ರಾಮಕ್ಕೆ ಮೊಸಳೆ ಬಂದಿದೆ ಎಂದು ಶಂಕಿಸಲಾಗಿದೆ. ನೀರಿಲ್ಲದ ಬಾವಿಯಲ್ಲಿ ಮೊಸಳೆ ಕಂಡ ಗ್ರಾಮಸ್ಥರು ಭಯಬಿದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *