ಹುಡ್ಗೀರಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹೊಟೇಲ್ ಮೇಲೆ ದಾಳಿ ನಡೆಸಿದ ಮಂಡ್ಯದ ವಿದ್ಯಾರ್ಥಿಗಳು!

Public TV
1 Min Read
KWR DANDALE

ಕಾರವಾರ: ಹುಡುಗಿಯರಿಗೆ ಚುಡಾಯಿಸಿದ್ದನ್ನು ಹೊಟೇಲ್ ಸಿಬ್ಬಂದಿ ಪ್ರಶ್ನಿಸಿ ಕಾರಣಕ್ಕೆ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳ ಗುಂಪೊಂದು ಹೊಟೇಲ್ ಗ್ಲಾಸ್ ಒಡೆದು ದಾಂಧಲೆ ನೆಡೆಸಿದ ಘಟನೆ ಜಿಲ್ಲೆಯಲ್ಲಿ ತಡರಾತ್ರಿ ನಡೆದಿದೆ.

ನಗರದ ರವೀಂದ್ರನಾಥ್ ಕಡಲತೀರದಲ್ಲಿರುವ ಗಣಪತಿ ಉಳ್ವೇಕರ್ ಮಾಲೀಕತ್ವದ ಡ್ರೈವ್ ಇನ್ ಹೊಟೇಲ್ ಮೇಲೆ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳ ಗುಂಪು ಈ ದಾಂಧಲೆ ನಡೆಸಿದೆ.

ಮಂಡ್ಯ ಜಿಲ್ಲೆಯ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳ ಗುಂಪು ಶನಿವಾರ ರಾತ್ರಿ ಕಾರವಾರಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಹೀಗಾಗಿ ರಾತ್ರಿ ಊಟಕ್ಕೆಂದು ಡ್ರೈವ್ ಇನ್ ಹೊಟೇಲ್ ಬಳಿ ನಿಂತಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿದ್ದ ಸ್ಥಳೀಯ ಹುಡುಗಿಯರನ್ನು ಹುಡಗರ ಗುಂಪು ಚುಡಾಯಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಟೇಲ್ ಸಿಬ್ಬಂದಿ ಹುಡುಗರನ್ನು ಪ್ರಶ್ನಿಸಿಸಿದ್ದಾರೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ಪ್ರವಾಸಿ ವಿದ್ಯಾರ್ಥಿಗಳ ಗುಂಪು ಹೊಟೇಲ್ ಗ್ಲಾಸ್ ಒಡೆದಿದ್ದಾರೆ.

ಈ ಸಂಬಂಧ ಕಾರವಾರ ನಗರ ಪೂಲೀಸರಿಗೆ ಮಾಹಿತಿ ನೀಡಿದ್ದು, 54 ಪ್ರವಾಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆಗೆ ಕೈಗೊಂಡಿದ್ದಾರೆ.

KWR DANDALE 2

KWR DANDALE 3

KWR DANDALE 4

KWR DANDALE10

KWR DANDALE9

KWR DANDALE8

KWR DANDALE 7

KWR DANDALE 6

KWR DANDALE 5

KWR DANDALE 1 1

Share This Article
Leave a Comment

Leave a Reply

Your email address will not be published. Required fields are marked *