Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೋದಿ ತಾಕತ್ ಪಾಕ್‍ಗೆ ಗೊತ್ತಾಗಿದೆ – ಮತ್ತೆ ಪ್ರಧಾನಿ ಆಗಬೇಕೆಂಬುದು ನನ್ನ ಆಸೆ: ಎಸ್‍ಎಂ ಕೃಷ್ಣ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮೋದಿ ತಾಕತ್ ಪಾಕ್‍ಗೆ ಗೊತ್ತಾಗಿದೆ – ಮತ್ತೆ ಪ್ರಧಾನಿ ಆಗಬೇಕೆಂಬುದು ನನ್ನ ಆಸೆ: ಎಸ್‍ಎಂ ಕೃಷ್ಣ

Districts

ಮೋದಿ ತಾಕತ್ ಪಾಕ್‍ಗೆ ಗೊತ್ತಾಗಿದೆ – ಮತ್ತೆ ಪ್ರಧಾನಿ ಆಗಬೇಕೆಂಬುದು ನನ್ನ ಆಸೆ: ಎಸ್‍ಎಂ ಕೃಷ್ಣ

Public TV
Last updated: February 9, 2019 4:37 pm
Public TV
Share
3 Min Read
SM KRISHNA MODI
SHARE

-ಕಾಂಗ್ರೆಸ್ ಪಕ್ಷದಲ್ಲಿದ್ದ ನನ್ನ ಬೆಂಬಲಿಗರೆಲ್ಲರೂ ಬಿಜೆಪಿಗೆ ಬರಬೇಕು

ಮಂಡ್ಯ: ಲೋಕಸಭಾ ಚುನಾವಣೆಗೆ ರಾಜ್ಯದ ಕೆಲ ಭಾಗಗಳಲ್ಲಿ ನಾನು ಪಕ್ಷದ ಪರ ಪ್ರಚಾರಕ್ಕೆ ಹೋಗಲಿದ್ದು, ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಎನ್ನುವುದು ನನ್ನ ಆಸೆ ಎಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಹೇಳಿದ್ದಾರೆ.

ಮಂಡ್ಯದಲ್ಲಿ ನಡೆದ ಪಕ್ಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದಿಂದ ಯಾವ ಅಧಿಕಾರವನ್ನು ಅಪೇಕ್ಷೆ ಮಾಡುವುದಿಲ್ಲ. ಲೋಕಸಭೆ ಚುನಾವಣೆ ದೇಶದಲ್ಲಿ ಅತ್ಯಂತ ಮಹತ್ವವಾದಗಿದ್ದು, ನಮ್ಮ ಗಮನವೆಲ್ಲ ಲೋಕಸಭೆ ಚುನಾವಣೆಗೆ ಕೇಂದ್ರಿಕೃತವಾಗಿದೆ. ಬಿಜೆಪಿಗೆ ಈ ಬಾರಿ ಕ್ಷೇತ್ರದಲ್ಲಿ ದೊಡ್ಡ ಬೆಂಬಲ ಸಿಗುವ ನಿರೀಕ್ಷೆ ಇದ್ದು, ಭಾರತ ದೇಶ ಇಂದು ನಿರ್ಣಾಯಕ ಘಟ್ಟ ಮುಟ್ಟುತ್ತಿದೆ. 2014ರಲ್ಲಿ ಭಾರತದಲ್ಲಿ ದೊಡ್ಡ ಕ್ರಾಂತಿ ನಡೆಯಿತು. ಆ ಕ್ರಾಂತಿಯ ಹರಿಕಾರ ನರೇಂದ್ರ ಮೋದಿ ಆಗಿದ್ದು, ಇದರ ಫಲವಾಗಿ ದೇಶಕ್ಕೆ ಉತ್ತಮ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಮೋದಿ ಅವರ ಈ ಯೋಜನೆಗಳು ಸಹಾಯಕ ಆಗಿದೆಯಾ ಎಂಬ ಬಗ್ಗೆ ಗುಣಾತ್ಮಕ ಚಿಂತನೆ ನಡೆಯಬೇಕು ಎಂದರು.

SM KRISHNA MANDYA 2

ಭಾರತ ರಕ್ಷಣೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಬೆಳೆವಣಿಗೆ ಆಗುತ್ತಿದ್ದು, ಮೋದಿ ತಾಕತ್ತು ಪಾಕಿಸ್ತಾನಕ್ಕೆ ಗೊತ್ತು. ಸದ್ಯ ಪಾಕಿಸ್ತಾನ ಅನಾಯಕತ್ವದ ಹಾದಿ ಹಿಡಿದಿದ್ದು, ಭಾರತ ಆರ್ಥಿಕವಾಗಿ ಬೆಳೆಯುತ್ತಿದೆ. ಅದಕ್ಕೆ ಪ್ರಧಾನಿಗಳಾಗಿರುವ ಮೋದಿ ಕಾರಣ. ಆದ್ದರಿಂದ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು. ಇದೇ ವೇಳೆ ಮೋದಿ ವಿರೋಧಿಗಳು ಇದ್ದು, ಅವರನ್ನು ಸರ್ವಾಧಿಕಾರಿ ಎಂದು ಗುಜರಾತ್ ಘಟನೆಗಳನ್ನು ತೆಗೆದು ಟೀಕಿಸುತ್ತಾರೆ. ಆದರೆ ಮೋದಿ ಗಟ್ಟಿ ಮನುಷ್ಯ, ಸರ್ದಾರ್ ವಲ್ಲಭಭಾಯ್ ಪಟೇಲರಿಗೆ ಕಾಂಗ್ರೆಸ್ ಕೊಡದ ಗೌರವವನ್ನ ಅವರು ಕೊಟ್ಟಿದ್ದಾರೆ. ಪಟೇಲರ ಆಡಳಿತ ದೇಶಕ್ಕೆ ಸಿಗದಿದ್ದರೆ ಭಾರತ ಛಿದ್ರವಾಗುತ್ತಿತ್ತು. ಈಗ ಮೋದಿ ಮತ್ತೆ 5 ವರ್ಷ ದೇಶವನ್ನು ಮುಂದುವರಿಸಬೇಕಾದ ಅಗತ್ಯತೆ ಇದೆ ಎಂದರು.

ರಾಹುಲ್ ವಿರುದ್ಧ ವಾಗ್ದಾಳಿ: 2004 ರಿಂದ 2014 ರವರೆಗೂ ಇದ್ದ ಕಾಂಗ್ರೆಸ್ ಮುಂದಾಳತ್ವದ ಯುಪಿಎ ಸರ್ಕಾರದಲ್ಲಿ ನಾನು ವಿದೇಶಾಂಗ ಸಚಿವನಾಗಿದ್ದೆ. ಆಗ ನಡೆದ ಒಳ್ಳೆಯ ಹಾಗೂ ಕೆಟ್ಟ ಬೆಳವಣಿಗೆಯಲ್ಲಿ ನಾನು ಸಹ ಭಾಗಿ ಆಗಿದೆ. ಆಗಿನ ಪ್ರಧಾನಿಗಳಾದ ಮನಮೋಹನ್ ಸಿಂಗ್ ಅವರಿಗೆ ಸರ್ಕಾರ ಮೇಲೆ ಹಿಡಿತ ಇರಲಿಲ್ಲ. ಕೆಲವೊಂದು ವಿಚಾರಗಳು ಪ್ರಧಾನಿಗಳ ಗಮನಕ್ಕೆ ಬರದೆ ಆಗುತ್ತಿದ್ದವು. ಆದ್ದರಿಂದಲೇ ದೊಡ್ಡ ದೊಡ್ಡ ಹಗರಣ ನಡೆಯಿತು. ಮೋದಿ ಸರ್ಕಾರದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ. ಅದೇ ದೇಶಕ್ಕೆ ಮೋದಿ ಕೊಟ್ಟ ದೊಡ್ಡ ಕೊಡುಗೆ. ಆದರೆ ನಾನು ಸಚಿವನಾಗಿದ್ದಾಗ 80 ವರ್ಷ ವಯಸ್ಸಿನವರು ಸಚಿವರಾಗಬಾರದು ಎಂದರು. ನಾನು ರಾಜೀನಾಮೆ ಕೊಟ್ಟು ಹೊರ ಬಂದೆ ಎಂದರು.

Sonia Gandhi Rahul Gandhi

ರಾಷ್ಟ್ರದ, ಪಾರ್ಲಿಮೆಂಟಿನ ಜವಾಬ್ದಾರನಲ್ಲದ ರಾಹುಲ್ ಸರ್ಕಾರದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಅದೇ ತೀರ್ಮಾನ ಅಂತಿಮವಾಗಿ ಚಲಾವಣೆಗೆ ಬರುತ್ತಿದ್ದವು. ಪ್ರಧಾನ ಕಾರ್ಯದರ್ಶಿ ಸಹ ಆಗದ ರಾಹುಲ್ ಗಾಂಧಿ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ನಾನು ಮುಖ್ಯಮಂತ್ರಿ ಆಗಿದ್ದಾಗ ವಾಜಪೇಯಿಯವರು ಪ್ರಧಾನಿ ಆಗಿದ್ದರು. ಆಗ ಅವರು ನನ್ನ ಪಾಲಿಗೆ ಧರ್ಮರಾಯನ ರೀತಿಯಾಗಿ ಈ ದೇಶವನ್ನು ಅಟಲ್‍ಬಿಹಾರಿ ವಾಜಪೇಯಿ ಆಳಿದರು ಎಂದು ತಿಳಿಸಿದರು.

ಸ್ಪರ್ಧೆ ಮಾಡಲ್ಲ: ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಂಡ್ಯ ಕ್ಷೇತ್ರದಲ್ಲಿ ನನ್ನ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಬನ್ನಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಇಂದು ಕಾರ್ಯಕರ್ತರೊಂದಿಗೆ ಕರೆದಿರುವ ಸಭೆ ಯಶಸ್ವಿ ಆಗುವ ವಿಶ್ವಾಸವಿದೆ. ನನ್ನ ಜೊತೆ ಕಾಂಗ್ರೆಸ್‍ನಲ್ಲಿದ್ದವರು ಬಿಜೆಪಿಗೆ ಬರಬೇಕು ಎಂಬುವುದು ನನ್ನ ಆಸೆ. ನಿರಂತರವಾಗಿ ಈ ಬಗ್ಗೆ ಬೆಂಬಲಿಗರ ಜೊತೆ ಮಾತನಾಡುತ್ತಿದ್ದೇನೆ ಎಂದರು. ಅಲ್ಲದೇ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ನನಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:bjpcongressformer cmLok Sabha electionmandyaprime minister modiPublic TVRahul GandhiSM Krishnaಎಸ್ ಎಂ ಕೃಷ್ಣಕಾಂಗ್ರೆಸ್ಪಬ್ಲಿಕ್ ಟಿವಿಪ್ರಧಾನಿ ಮೋದಿಬಿಜೆಪಿಮಂಡ್ಯಮಾಜಿ ಸಿಎಂರಾಹುಲ್ ಗಾಂಧಿಲೋಕಸಭಾ ಚುನಾವಣೆ
Share This Article
Facebook Whatsapp Whatsapp Telegram

Cinema news

Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories
Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories
MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood

You Might Also Like

Donald Trump 2
Latest

ಮುಂದುವರಿದ ಟ್ರಂಪ್‌ ಹುಚ್ಚಾಟ – ಎಲ್ಲಾ ದೇಶಗಳ ಮೇಲಿನ ಹೆಚ್ಚುವರಿ ಸುಂಕ 15% ಗೆ ಹೆಚ್ಚಿಸಿದ ಟ್ರಂಪ್‌

Public TV
By Public TV
3 hours ago
Chikkamagaluru Manu
Chikkamagaluru

ಪತ್ನಿಗೆ ಯುವಕನಿಂದ ಮೆಸೇಜ್‌ – ಮನನೊಂದು ನೇಣಿಗೆ ಶರಣಾದ ಪತಿ?

Public TV
By Public TV
3 hours ago
01 15
Big Bulletin

ಬಿಗ್‌ ಬುಲೆಟಿನ್‌ 21 February 2026 ಭಾಗ-1

Public TV
By Public TV
3 hours ago
02 16
Big Bulletin

ಬಿಗ್‌ ಬುಲೆಟಿನ್‌ 21 February 2026 ಭಾಗ-2

Public TV
By Public TV
3 hours ago
03 14
Big Bulletin

ಬಿಗ್‌ ಬುಲೆಟಿನ್‌ 21 February 2026 ಭಾಗ-3

Public TV
By Public TV
3 hours ago
pramod muthalik
Bagalkot

ಪ್ರಮೋದ್ ಮುತಾಲಿಕ್, ಪುನಿತ್ ಕೆರೆಹಳ್ಳಿಗೆ ಬಾಗಲಕೋಟೆ ಪ್ರವೇಶಿಸದಂತೆ ನಿರ್ಬಂಧ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?