Weekend With Ramesh ಶೋನಲ್ಲಿ ಪ್ರೇಮ ಪ್ರಸಂಗ ಬಿಚ್ಚಿಟ್ಟ ಮಂಡ್ಯ ರಮೇಶ್

Public TV
2 Min Read
mandya ramesh

ಕಿರುತೆರೆಯ ಜನಪ್ರಿಯ ಶೋ Weekend With Ramesh-5 ಕಾರ್ಯಕ್ರಮದಲ್ಲಿ ಖ್ಯಾತ ನಟ ಅವಿನಾಶ್ ನಂತರ ಮಂಡ್ಯ ರಮೇಶ್ (Mandya Ramesh) ಅವರು ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ನಟ ರಮೇಶ್ ಅರವಿಂದ್ (Ramesh Aravind) ಜೊತೆ ತಮ್ಮ ಲವ್ ಸ್ಟೋರಿ (Love Story), ಮದುವೆ (Wedding), ಜರ್ಮನಿಯ ನಡೆದ ಘಟನೆ ಬಗ್ಗೆ ಮಂಡ್ಯ ರಮೇಶ್ ಹಂಚಿಕೊಂಡಿದ್ದಾರೆ.

Mandya Ramesh

‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ಡಾಲಿ, ದತ್ತಣ್ಣ ಹೀಗೆ ಹಲವರು ಭಾಗವಹಿಸಿ ತಮ್ಮ ಬದುಕಿನ ಸ್ಪೂರ್ತಿದಾಯಕ ಕಥೆಗಳನ್ನ ಹಂಚಿಕೊಂಡಿದ್ದಾರೆ. ಇದೀಗ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಸರದಿ. ಪತ್ನಿ ಸರೋಜಾ (Saroja) ಅವರನ್ನ ಮೊದಲು ಭೇಟಿಯಾಗಿದ್ದು ಎಲ್ಲಿ? ಲವ್ ಕಹಾನಿ ಶುರುವಾಗಿದ್ದು ಹೇಗೆ? ಮಗಳು ದಿಶಾ ಬಂದ ಮೇಲೆ ಬದುಕಿನಲ್ಲಿ ಎದುರಿಸಿದ ಸವಾಲಿನ ಬಗ್ಗೆ ಮಂಡ್ಯ ರಮೇಶ್ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

mandya ramesh

ಮಂಡ್ಯ ರಮೇಶ್- ಸರೋಜಾ ಅವರು ಮೊದಲು ನೀನಾಸಂನಲ್ಲಿ ಭೇಟಿ ಮಾಡಿದ್ದರು. ಸರೋಜ ಅವರು ಬಿಂದಾಸ್ ಆಗಿ ಅವರ ಪಾಡಿಗೆ ಅವರು ಇರುತ್ತಿದ್ದರು. ಒಮ್ಮೆ ಸರೋಜ ಅವರು ಏನೋ ಒಂದು ಸಣ್ಣ ತಪ್ಪನ್ನು ಮಾಡಿದ್ದರು. ಇದು ಡಿಸಿಪ್ಲಿನ್ ಕಮಿಟಿ ಲೀಡರ್ ಆಗಿದ್ದ ಮಂಡ್ಯ ರಮೇಶ್ ಗಮನಕ್ಕೆ ಬಂತು. ನೀನಾಸಂನಲ್ಲಿ ಸರೋಜ ಅವರಿಗೆ ಶಿಸ್ತಿನ ಪಾಠ ಮಾಡಿದ್ದರು. ಕೆಲದಿನಗಳ ಬಳಿಕ ಮಂಡ್ಯ ರಮೇಶ್ ಅವರಿಗೆ ಅಪಘಾತವಾಗಿತ್ತು. ಆಸ್ಪತ್ರೆಯಲ್ಲಿ ರಮೇಶ್ ಅವರಿಗೆ ಒಂದು ವಾರಗಳ ಕಾಲ ಮೂರ್ಛೆ ತಪ್ಪೋದು, ಎಚ್ಚರ ಆಗೋದು ಆಗುತ್ತಿತ್ತಂತೆ. ಅಷ್ಟೂ ದಿನ ರಮೇಶ್ ಅವರನ್ನು ಸರೋಜಾ ನೋಡಿಕೊಳ್ಳುತ್ತಿದ್ದರು. ಅದನ್ನು ನೋಡಿ ರಮೇಶ್ ಅವರ ಅಕ್ಕ ನಾವಿದ್ದಾಗ ಇವಳ್ಯಾಕೆ ನಿನ್ನ ಟ್ರೀಟ್‌ಮೆಂಟ್ ಮಾಡ್ತಿದ್ದಾಳೆ, ಏನು ವಿಶೇಷ ಅಂತಾ ರಮೇಶ್‌ಗೆ ಪ್ರಶ್ನೆ ಕೇಳಲು ಆರಂಭಿಸಿದರು. ಮನಸ್ಸಿನಲ್ಲಿ ಏನೂ ಇಲ್ಲದಿದ್ದರೂ ಕೂಡ ಎಷ್ಟೋ ಪ್ರೇಮ ಪ್ರಸಂಗಗಳು ಬೇರೆಯವರು ಹೇಳಿ ಹೇಳಿ ಹುಟ್ಟತ್ತಂತೆ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.

saroja

ಅಪಘಾತ ಆದ ಬಳಿಕ ಪ್ರೇಮದ ಗಳಿಗೆಗಳು ಹುಟ್ಟಲು ಆರಂಭಿಸಿದವಂತೆ. ಕೊನೆಗೂ ಇವರಿಬ್ಬರು ಮದುವೆಯಾದರು. ಮಗು ಹುಟ್ಟಿತು. ಇಬ್ಬರು ಕಲಾವಿದರು ಜರ್ಮನಿಯಲ್ಲಿ ನಾಟಕವೊಂದರಲ್ಲಿ ನಟಿಸಬೇಕಿತ್ತು. ಆ ವೇಳೆ ಮಗಳು ದಿಶಾ (Disha) ಚಿಕ್ಕವಳು. ಮಗಳನ್ನು ಎತ್ತಿಕೊಂಡು ಗಲೀಜು ಮಾಡಿಕೊಂಡರೆ ಕಾಸ್ಟ್ಯೂಮ್ ಹಾಳಾಗುತ್ತದೆ ಅಂತ ಮುಟ್ಟದೆ ಮಗಳನ್ನು ಸಂತೈಸುತ್ತಿದ್ದರಂತೆ. ಜರ್ಮನಿಯಲ್ಲಿ ನಾಟಕದ ಸಮಯದಲ್ಲಿ ಮಗು ತುಂಬ ಅತ್ತಾಗ ಸರೋಜ ಅವರು ಎದೆಹಾಲು ಕುಡಿಸುತ್ತಿದ್ದರು. ಆಮೇಲೆ ನಾಟಕ ಶುರು ಆಯ್ತು ಅಂತ ಅವರು ಎದೆಯಿಂದ ಮಗುವನ್ನು ಕಿತ್ತಿಟ್ಟು ನಾಟಕ ಮಾಡಲು ಆರಂಭಿಸಿದರು. ಎಲ್ಲರೂ ಯಾಕೆ ಸರೋಜ ಅವರು ಇಷ್ಟು ಬೆವತರು ಅಂತ ಅಂದುಕೊಂಡರು. ಆದರೆ ಎದೆಯಿಂದ ಮಗುವನ್ನು ಕಿತ್ತಿಟ್ಟು ಬಂದಿದ್ದರಿಂದ ಇಡೀ ಮೈ ಹಾಲಾಗಿ ಹೋಗಿತ್ತು ಎಂದು ಮಂಡ್ಯ ರಮೇಶ್ ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

Share This Article