ಮಂಡ್ಯ: ಕಾಲೇಜು ಬಸ್ಸಿನ ಬ್ರೇಕ್ ಫೇಲ್- ಚಾಲಕನ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಪಾರು

Public TV
1 Min Read
mnd breakfail 4

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಬಳಿ ಬ್ರೇಕ್ ಫೇಲಾಗಿದ್ದ ಕಾಲೇಜಿನ ವಾಹನವನ್ನು ಯಾವುದೇ ಅಪಾಯ ಸಂಭವಿಸದಂತೆ ನಿಲ್ಲಿಸುವ ಮೂಲಕ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ.

mnd breakfail 3

ಬಸ್ ಚಾಲಕ ಸುನಿಲ್ ಅವರ ಸಮಯ ಪ್ರಜ್ಞೆಯಿಂದ ಅಪಘಾತವೊಂದು ತಪ್ಪಿದೆ. ಮೈಸೂರಿನ ಎಂಐಟಿ ಕಾಲೇಜಿಗೆ ಸೇರಿದ ಬಸ್‍ನಲ್ಲಿ ಆರು ಜನ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ಬಸ್‍ನ ಬ್ರೇಕ್ ಫೇಲ್ ಆಗಿದ್ದು ಚಾಲಕ ಸುನಿಲ್ ಗಮನಕ್ಕೆ ಬಂದಿದೆ. ಸುನಿಲ್ ಎದೆಗುಂದದೆ ವಾಹನದ ವೇಗವನ್ನ ನಿಧಾನಗತಿಗೆ ತಂದು ಸುಮಾರು ಒಂದು ಕಿಲೋಮೀಟರ್‍ನಷ್ಟು ದೂರ ವಾಹನ ಚಲಾಯಿಸಿದ್ದಾರೆ.

mnd breakfail 1

ವಾಹನದ ವೇಗ ಕಡಿಮೆಯಾಗುತ್ತಿದ್ದಂತೆ ಸುನಿಲ್ ರಸ್ತೆಪಕ್ಕ ಬಸ್ ನಿಲ್ಲಿಸುವ ಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜು ವಾಹನ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗದೆ ಎಲ್ಲರೂ ಸುರಕ್ಷಿತವಾಗಿದ್ದಾರೆ.

mnd breakfail 2

 

Share This Article
Leave a Comment

Leave a Reply

Your email address will not be published. Required fields are marked *