ತಾನು ಜೈಲು ಸೇರಲು ಕಾರಣನಾದವನ ಮರ್ಮಾಂಗಕ್ಕೆ ಗುದ್ದಿ ಕೊಲೆಗೆ ಯತ್ನ

Public TV
1 Min Read
mys maryada hatye

ಮೈಸೂರು: ಜೈಲು ವಾಸ ಅನುಭವಿಸಿ ಜಾಮೀನಿನಿಂದ ಹೊರ ಬಂದ ಮರುದಿನವೇ ಕೊಲೆ ಯತ್ನ ನಡೆಸಿರುವ ಘಟನೆ ನಂಜನಗೂಡಿನ ಬಿಳುಗಲಿ ಗ್ರಾಮದಲ್ಲಿ ನಡೆದಿದೆ.

ಶಿವು ಕೊಲೆಗೆ ಯತ್ನಿಸಿದವನು. ತಾನು ಜೈಲು ಸೇರಲು ಕಾರಣನಾದವನ ಮರ್ಮಾಂಗಕ್ಕೆ ಗುದ್ದಿ ಕೊಲೆ ಮಾಡಲು ಯತ್ನಿಸಿ ಶಿವು ಪರಾರಿಯಾಗಿದ್ದಾನೆ. ಗ್ರಾಮದ ಅಭಿವೃದ್ಧಿ ನೆಪದಲ್ಲಿ ಶಿವು ತಂಡವೊಂದನ್ನು ಕಟ್ಟಿದ್ದನು. ಇದನ್ನು ರಾಜೇಂದ್ರ ಪ್ರಶ್ನಿಸಿದ್ದರು. ಇದರಿಂದ ದ್ವೇಷ ಬೆಳೆಸಿಕೊಂಡ ಶಿವು, ಮಾರ್ಚ್ ನಲ್ಲಿ ರಾಜೇಂದ್ರ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದನು.

ಏಪ್ರಿಲ್ 28ರಂದು ಜಾಮೀನು ಪಡೆದು ಹೊರ ಬಂದ ಶಿವು, ಮರುದಿನವೇ ರಾಜೇಂದ್ರನ ಮೇಲೆ ಹಲ್ಲೆ ನಡೆಸಿದ್ದಾನೆ. ರಾಜೇಂದ್ರನ ಮರ್ಮಾಂಗಕ್ಕೆ ಗುದ್ದಿ ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ರಾಜೇಂದ್ರ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ದೊಡ್ಡಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *